PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-29-  ಆದ್ಯಾತ್ಮ ಪ್ರವಚನದಿಂದ ತರುಣ ಪೀಳಿಗೆಯ ಮನಪರಿವರ್ತನೆ ಗೊಳಿಸಿ ಮತ್ತು ಧಾಮಿಕ ಚೈತನ್ಯ ಮೂಡಿಸಿ ಆದ್ಯಾತ್ಮಿಕತ್ವದ ಮಹತ್ವವನ್ನು ಜನರಲ್ಲಿ ಬೆಳಸಬೇಕಿದೆ ಎಂದು ನಿವೃತ್ತ ಶಿಕ್ಷಕ ಬಾಳನಗೌಡ ಪೊಲೀಸ್ ಪಾಟೀಲ ಹೇಳಿದರು.
    ಅವರು ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದಲ್ಲಿ ೧೭೯ ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಬಾಲ್ಯದಲ್ಲಿಯೇ ಸತ್ಸಂಗದಲ್ಲಿ ಭಾ
    ಈ ಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭ್ರಹ್ಮ ವಿದ್ಯಾಶ್ರಮ ಅಧ್ಯಕ್ಷರು ಚಂದ್ರಾಮಪ್ಪ ಕಣಕಾಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್‌ನ ವ್ಯವಸ್ಥಾಪಕ ಶಂಕರಗೌಡ ಹಿರೇಗೌಡರ, ಸಿದ್ದಾರೋಡ ಚೆಲ್ಲಾ ಇತರರು ವೇದಿಕೆ ಮೇಲಿದ್ದರು.
ಗವಹಿಸುತ್ತಹೋದರೆ ಮುಂದೆ ಮಕ್ಕಳು ಸಂಸ್ಕಾರ ಭರಿತ ಸುಸಂಸ್ಕೃತರಾಗಿ ಬೆಳೆಯಬಲ್ಲರು ಎಂದರು. ನಂತರ ಜಾನಪದ ಕಲಾವಿದ ಹಾಗೂ ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ಜಾನಪದ ಮತ್ತು ಲಾವಣಿ ಹಾಡುಗಳನ್ನು ಹಾಡುತ್ತಾ ಪಾಶ್ಚಿಮಾತ್ಯ ಸಂಗೀತ ಮತ್ತು ಪಾಶ್ಚಿಮಾತ್ಯ ಉಡುಗೆ ತೊಡುಗೆಗಳಿಗೆ ಯುವಕರು ಮಾರುಹೋಗಿ ನಮ್ಮ ಹಳ್ಳಿಗರ ಮೋಜು ಮಜುಲುಗಳು ಮಾಯವಾಗುತ್ತಿವೆ. ಕಲೆ ಸಂಸ್ಕೃತಿ ಬಡವಾಗಿ ಸಂಪತ್ತಿನ ದಿನಗಳು ಮರೆಯಾಗಿ ಬದುಕು ಹೊರೆಯಾಗುತ್ತಿದೆ. ಸಂಸ್ಕೃತಿ ಬೆಳೆಸುವ ಪ್ರಯತ್ನ ದಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು.

Advertisement

0 comments:

Post a Comment

 
Top