PLEASE LOGIN TO KANNADANET.COM FOR REGULAR NEWS-UPDATES

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಆರ್ಥಿಕ ಕಾನೂನು ಗಳನ್ನು ವಿರೋಧಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದು, ಸಾರಿಗೆ, ಬ್ಯಾಂಕು, ವಿಮೆ, ಅಂಚೆ ಹಾಗೂ ಕೈಗಾರಿಕಾ ವಲಯಗಳ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಗೆ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನೌಕರರು ಬೆಂಬಲ ನೀಡಿದ ಕಾರಣ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಪ್ರಯಾಣಿಕರಿಗೆ ತೊಂದರೆ ಆಗಲಿದೆ.
 ಈ ಸೇವೆ ಇರಲಿದೆ.
– ಭಾರತೀಯ ರೈಲ್ವೆಯನ್ನು ಈ ಮುಷ್ಕರದಿಂದ ಹೊರಗಿಡಲಾಗಿದೆ.
– ಎಸ್‍ಬಿಐ, ಬ್ಯಾಂಕ್ ಆಫ್ ಬರೋಡಾ ಹೊರತು ಪಡಿಸಿ ಎಲ್ಲಾ ಬ್ಯಾಂಕ್‍ಗಳು ಸ್ಥಗಿತ
– ಹಾಲು, ಔಷಧ ವಾಹನಗಳು, ಖಾಸಗಿ ಬಸ್, ಲಾರಿ, ಸಿಟಿ ಟ್ಯಾಕ್ಸಿಗಳು ಸಂಚರಿಸಲಿದೆ.
ಈ ಸೇವೆ ಇರುವುದಿಲ್ಲ.
– ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸೇವೆ ಇರಲ್ಲ
– ಮಕ್ಕಳಿಗೆ ಬಿಸಿಯುಟ ಇರಲ್ಲ
– ಬ್ಯಾಂಕ್, ಜೀವವಿಮಾ ನಿಗಮ ಸ್ಥಗಿತ
– ರಸ್ತೆಯಲ್ಲಿ ಆಟೋ ಸಂಚಾರ ಇರುವುದಿಲ್ಲ
ಕಾರ್ಮಿಕರ ಬೇಡಿಕೆ ಏನು?
– ಕನಿಷ್ಠ ವೇತನ 15 ಸಾವಿರ ನಿಗದಿಗೊಳಿಸಬೇಕು
– ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು
– ಕನಿಷ್ಟ ಪಿಂಚಣಿ 3 ಸಾವಿರಕ್ಕೆ ಏರಿಸಬೇಕು
– ಬೋನಸ್ ಭವಿಷ್ಯ ನಿಧಿ, ಗ್ರಾಚ್ಯುಟಿ ಮಿತಿ ಹೆಚ್ಚಿಸಬೇಕು
– ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ನೀಡಬೇಕು
– ಆರೋಗ್ಯ, ಶಿಕ್ಷಣ ವಲಯಕ್ಕೆ ಅನುದಾನ ಕಡಿತಕ್ಕೆ ವಿರೋಧ
– ವಿಮೆ, ಬಿಎಸ್‍ಎನ್‍ಎಲ್, ರೈಲ್ವೆ ಇಲಾಖೆ ಖಾಸಗೀಕರಣಕ್ಕೆ ವಿರೋಧ
– ಸಾರ್ವಜನಿಕ ಉದ್ದಿಮೆಗಳನ್ನು ರಕ್ಷಿಸಬೇಕು
– ರೈತರ ಆತ್ಮಹತ್ಯೆ ತಡೆಯಬೇಕು
– ಭೂಸ್ವಾಧೀನ ತಿದ್ದುಪಡಿಗೆ ವಿರೋಧ
– ರಸ್ತೆ ಸಾರಿಗೆ ಮತ್ತು ಸುರಕ್ಷಾ ಮಸೂದೆಯನ್ನು ಹಿಂಪಡೆಯುವುದು.


Advertisement

0 comments:

Post a Comment

 
Top