PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಡಿ.ಎಸ್.ಇ.ಆರ್.ಟಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗವಿಶಿದ್ಧೇಶ್ವರ ಬಿ.ಎಡ್ ಕಾಲೇಜು ಕೊಪ್ಪಳದಲ್ಲಿ ದಿನಾಂಕ: ೩೧-೦೭-೨೦೧೫ ರಂದು ನಡೆದ ಕೊಪ್ಪಳ ತಾಲೂಕ ಮಟ್ಟದ ವಿಜ್ಞಾನ ನಾಟಕ ಸ್ಪಧೆಯಲ್ಲಿ ನಮ್ಮ ಶಾಲೆಯ ವಿದ್ಯಾ ವಿಕಾಸ ಕನ್ನಡ ಮಾಧ್ಯಮ ಪ್ರೌಢ ಶಾಲೆ ವಿಧ್ಯಾರ್ಥಿಗಳು ನಾಟಕ ಪ್ರದರ್ಶನವನ್ನು ಮಾಡಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಪ್ರಶಸ್ತಿ ಪುರಸ್ಕೃತರಾದ ವಿಧ್ಯಾರ್ಥಿಗಳಿಗೂ ಮತ್ತು ಮಾರ್ಗದರ್ಶವನ್ನು ನೀಡಿದ ಶಿಕ್ಷಕರಾದ ಸುಪ್ರೀಯಾ ಹುನಗುಂದ ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ಹಾಗ ಆಡಳಿತ ಮಂಡಳಿಯವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯರಾದ ವಾದಿರಾಜ ದೇಸಾಯಿಯವರು ತಿಳಿಸಿದ್ದಾರೆ .

Advertisement

0 comments:

Post a Comment

 
Top