PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಮೇ ೧೦ ರವಿವಾರ ದಂದು ಶ್ರೀ ಶಿವಶರಣೆ  ಹೇಮರಡ್ಡಿಮಲ್ಲಮ್ಮ ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಅಂದು ಬೆಳಗ್ಗೆ  ೦೫:೦೦ ಗಂಟೆಗೆ ಬಿಲ್ವಾ ಪುಷ್ಟಾರ್ಚನೆ, ಅಭಿಷೇಕ ಜರುಗುವುದು ನಂತರ ೦೮:೦೦ ಗಂಟೆಗೆ ಬನ್ನಿಕಟ್ಟಿಯಿಂದ ಹೊನ್ನಲಾಂಭಿಕದೇವಸ್ಥಾನದ ವರಗೆ ಮಹಿಳೆಯರ ಕುಂಭಮೇಳ ಹಾಗೂ ಡೊಳ್ಳು ವಾದ್ಯಗಳೊಂದಿಗೆ ಶ್ರೀ ಶಿವಶರಣೆ  ಹೇಮರಡ್ಡಿಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಭಾವಚಿತ್ರ ಮೆರವಣಿಗೆ ಜರುಗುವುದು.
 ಕಾರ್ಯಕ್ರಮಕ್ಕೆ ಆಗಮಿಸಿದ ಸಕಲ ಸದ್ಭಕ್ತರಿಗೆ  ಮಧ್ಯ್ನಾಹ ೧೨:೦೦ ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಜಯಂತೋತ್ಸವದ ಪ್ರಯುಕ್ತ  ಸಾಯಂಕಾಲ ೦೭:೦೦ ಗಂಟೆಗೆ ಬಾಣ ಬಿರುಸು ಮದ್ದು ಸುಡುವ ಕಾರ್ಯಕ್ರಮವಿದ್ದು, ರಾತ್ರಿ ೧೦ ಗಂಟೆಗೆ ಗ್ರಾಮದ ಯುವ ಕಲಾವಿದರಿಂದ  ಧನಿಕರ ದೌರ್ಜನ್ಯ ಎಂಬ ಸುಂದರ ಸಾಮಾಜಿಕ ನಾಟಕವನ್ನು ಅಭಿನಯಿಸುವರು  .
08 May 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top