PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಏ,೦೬: ಕೊಪ್ಪಳದ ಮುಸ್ಲಿಂ ಶಾದಿಮಹಲ್(ಸುನ್ನಿ) ಇದರ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು ಇದೇ ಏಪ್ರಿಲ್ ೩ರಿಂದ ಚುನಾವಣಾ ಪ್ರಕ್ರೀಯೇ ಆರಂಭಗೊಂಡಿದೆ ಇದಕ್ಕೆ ಸಹಾಯಕ ಚುನಾವಣಾಧಿಕಾರಿಯಾಗಿ ಇಮಾಮ್ ಹುಸೇನರವರು ನೇಮಕ ಗೊಂಡಿದ್ದಾರೆ.
  ಏಪ್ರಿಲ್ ೧೦ರಂದು ನಾಮಪತ್ರ ಸಲ್ಲಿಕೆ ಪ್ರಕ್ರೀಯೇ ಆರಂಭ, ೧೭ರಂದು ಕೊನೆಯ ದಿನ. ೧೮ ರಂದು ನಾಮಪತ್ರ ಪರಿಶೀಲನೆ, ೧೯ ರಂದು ನಾಮಪತ್ರ ಹಿಂಪಡೆಯಲು ಕೊನೆಯದಿನ. ೨೬ರಂದು ಅಗತ್ಯ ಬಿದ್ದಲ್ಲಿ ಚುನಾವಣೆ ನಂತರ ಅದೇ ದಿನ ಮತ ಏಣಿಕೆ ಫಲಿತಾಂಶ ಘೋಷಣೆ ಮಾಡಲಾಗುವುದು.
   ಕರ್ನಾಟಕ ರಾಜ್ಯ ವಕ್ಫ ಮಂಡಳಿಯ ನಿರ್ದೇಶನದಂತೆ ಮಂಡಳಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹಾಗೂ ಚುನಾವಣಾಧಿಕಾರಿಯವರ ಮಾರ್ಗದರ್ಶನದಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿ ಇಮಾಮ್ ಹುಸೇನ್ ತಳಕಲ್ಲ ರವರು ಕೊಪ್ಪಳ ಶಾದಿಖಾನಾ ಆಡಳಿತ ಮಂಡಳಿಯ ಚುನಾವಣೆ ನಡೆಸಲಿದ್ದಾರೆ.

Advertisement

0 comments:

Post a Comment

 
Top