PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ಇತ್ತೀಚಿಗೆ ಜರುಗಿದ ಲಿಂ.ಜ.ಶ್ರೀಶಿವಶಾಂತವೀರ ಮಹಾಸ್ವಾಮಿಗಳ ೧೨ ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ  ಶ್ರೀಮತಿ ಶಾರದಮ್ಮಾ  ವ್ಹಿ. ಕೊತಬಾಳ  ಪದವಿ ಮಹಾವಿದ್ಯಾಲಯದಲ್ಲಿ ಬಿ.ಸಿ.ಎ ವಿಭಾಗದಲ್ಲಿ ಓದುತ್ತಿದ್ದ ಕುಮಾರಿ ಸೋನಿಯಾ ಮೋಥಾ ಇವರು ಬಳ್ಳಾರಿಯ ವಿಜಯನಗರ  ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕು ಪಡೆದಿದ್ದಕ್ಕಾಗಿ  ಶ್ರೀಗವಿಮಠದ ಪರವಾಗಿ ಬಳಗಾನೂರಿನ ಶ್ರೀಶಿವಶಾಂತವೀರ ಶರಣರು ಗೌರವಿಸಿ ಸನ್ಮಾನಿಸಿದರು.ಈ ಸಮಯದಲ್ಲಿ ಶ್ರೀಮ.ನಿ.ಪ್ರ.ಚನ್ನಮಲ್ಲಸ್ವಾಮಿಗಳು ತಿಕೋಟಾ,  ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಹೂವಿನ ಹಡಗಲಿಯ ಹಿರಿಶಾಂತವೀರ ಮಹಾಸ್ವಾಮಿಗಳು ಹಾಗೂ ಮುಖ್ಯ ಅತಿಥಿಗಳಾದ ಸಾಹಿತಿ ಜಿ.ಎಸ್.ಹನ್ನೆರಡುಮಠ ಉಪಸ್ಥಿತರಿದ್ದರು.

Advertisement

0 comments:

Post a Comment

 
Top