ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ ೫ ಪ್ರಕಾರಗಳಿಗೆ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದ್ದು, ಮಕ್ಕಳ ಸಾಹಿತ್ಯಾಧಾರಿತ ಪುಸ್ತಕಗಳನ್ನು ಲೇಖಕರಿಂದ ಆಹ್ವಾನಿಸಲಾಗಿದೆ.
೨೦೧೩ನೇ ಸಾಲಿನಲ್ಲಿ ಜನೇವರಿ ೨೦೧೩ ರಿಂದ ಡಿಸೆಂಬರ ೨೦೧೩ ರವರೆಗೆ ಮತ್ತು ೨೦೧೪ನೇ ಸಾಲಿನಲ್ಲಿ ಜನೇವರಿ ೨೦೧೪ ರಿಂದ ಡಿಸೆಂಬರ್ ೨೦೧೪ ರವರೆಗೆ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ(ಪಠ್ಯಾಧಾರಿತ ಬಿಟ್ಟು), ಮಕ್ಕಳ ಜನಪದ(ಸೃಜನಾತ್ಮಕ ಸಂಪಾದಿತ) ವೈಜ್ಞಾನಿಕ ಕೃತಿ, ಅನುವಾದಿತ(ಯಾವುದೇ ಪ್ರಕರದ ಮಕ್ಕಳ ಸಾಹಿತ್ಯ) ಸಂಕೀರ್ಣ (ವಿಮರ್ಶೆ, ಲೇಖನ ಇತ್ಯಾದಿ) ಪುಸ್ತಕಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಮಕ್ಕಳು, ಮಕ್ಕಳಿಗಾಗಿ ಪ್ರಕಟಿಸಿದ ಕಾವ್ಯ, ಕಥೆ, ಕೃತಿಗಳನ್ನು ಸಹ ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಆದರೆ ಅವು ನಿಗದಿತ ಅವಧಿಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆಯಾಗಿರಬೇಕು. ಪ್ರಶಸ್ತಿಗಳಿಗೆ ಆಯ್ಕೆಯಾದ ಕೃತಿಗಳಿಗೆ ೫,೦೦೦/- ರೂ. ನಗದು ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾಗುವುದು. ಈಗಾಗಲೇ ಅಕಾಡೆಮಿಯಿಂದ ಪ್ರಶಸ್ತಿ ಪಡೆದವರು ಈ ಸೌಲಭ್ಯಕ್ಕೆ ಅರ್ಹರಲ್ಲ.
ಪುಸ್ತಕಗಳನ್ನು ಕಳುಹಿಸಲು ಮಾ.೧೫ ಕೊನೆ ದಿನಾಂಕವಾಗಿದ್ದು, ಲೇಖಕರು ಪ್ರತಿಯೊಂದು ಪುಸ್ತಕದ ೪ ಪ್ರತಿಗಳನ್ನು, ಯೋಜನಾಧಿಕಾರಿಗಳು, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ, ಪೋಲೀಸ್ ಹೆಡ್ಕ್ವಾರ್ಟರ್ಸ್ ರಸ್ತೆ, ಮಹಾಂತೇಶ ನಗರ, ಧಾರವಾಡ -೦೮ ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ತಿಳಿಸಿದ್ದಾರೆ.
0 comments:
Post a Comment