PLEASE LOGIN TO KANNADANET.COM FOR REGULAR NEWS-UPDATES

ಕಾಮಿ ಸ್ವಾಮಿ ಗೂರೂಜೀಯಾದ (ಮಾರುತಿ ಭಟ್ಟರ) ವರನ್ನು ಕೂಡಲೇ
ಬಂಧಿಸು
ವಂತೆ ಕರವೇ (ಸ್ವಾಬಿಮಾನಿ ಬಣ) ದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಖ್ಯಮಂತ್ರಿಗಳಿಗೆ ಮನವಿ
ಕೊಪ್ಪಳ: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿಬಣ) ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರ ಬಯಸುವುದೆನೆಂದರೆ ದಿನಾಂಕ ೩೦.೦೧.೨೦೧೫ ರಂದು ಕಾರವಾರ ಜಿಲ್ಲೆ ಜಂಗಮಕ್ಕಿಯ ಕಾಮಿ ಸ್ವಾಮಿಯಾದ (ಗೂರೂಜೀಯಾದ) ಮಾರುತಿ ಭಟ್ಟ ರವರ ಕಾಮ ಕೃತ್ಯವನ್ನು ಮತ್ತು ಕಾಮಿ ಸ್ವಾಮಿಯ ಮತ್ತೊಂದು ಮುಖವಾಡವನ್ನು ಬಯಲಿಗೆ ಎಳೆದಿದ್ದು ಸ್ವತಃ ಅವರ ತಾಯಿಯವರು ಹೇಳಿದಂತೆ ಮಾರುತಿ ಭಟ್ಟ್ ಅಲಿಯಾಸ ಗೂರೂಜೀಯವರಿಗೆ ಯಾವ ದೇವರು ಬರುವುದಿಲ್ಲಾ ಅವನೊಬ್ಭ ಕಾಮ ಪಿಶಾಚಿ, ಅವನು ದೇವರ ಹೇಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದು ನನ್ನನು ಸಹ ಗೊಣಿ ಚೀಲದಂತೆ ಕಟ್ಟಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಿ ಹೊರಹಾಕಿದ್ದು ಮತ್ತು ಅದಲ್ಲದೆ ಅವರ ತಾಯಿಯ ಸ್ಥಾನದಲ್ಲಿರುವ ಅತ್ತಿಗೆಯಾದ ನಯನ ಭಟ್ಟ ರವರನ್ನು ಅತ್ಯಚಾರ ಮಾಡಲು ಪ್ರಯತ್ನಿಸದ ಕೃತ್ಯ ಖಂಡನಿಯ. ಕಾಮಿ ಸ್ವಾಮಿಗಳ ವಿರುದ್ಧ ಭಕ್ತರು ಹರಕೆ ಮಾಡಿಕೊಳ್ಳದೆ ಪೊರಕೆ ಹಿಡಿಯಬೆಕೇಂದು ಕಾಮಿ ಸ್ವಾಮಿಜಿಯಾದ ಮಾರುತಿ ಭಟ್ಟ ಸಮಾಜದ ಸ್ತ್ರೀ ತನವನ್ನು ಬೆತ್ತಲುಗೊಳಿಸುವಂತಹ ಕೃತ್ಯಮಾಡುತ್ತಿದ್ದಾನೆ ಇದರಿಂದ ಕೂಡಲೇ ಕಾಮಿ ಸ್ವಾಮಿಯಾದ ಮಾರುತಿ ಭಟ್ಟನ್ನು ಕೂಡಲೇ ಭಂದಿಸಬೆಕು ಅವರ ಆಸ್ತಿಯನ್ನು ಮುಟ್ಟಗೊಲು ಹಾಕಬೇಕು ಅವರ ತಾಯಿ ಮತ್ತು ಅತ್ತಿಗೆಗೆ ನ್ಯಾಯ ಸಿಗಬೇಕೆಂದು ಮತ್ತು ಕಾಮಿ ಸ್ವಾಮಿಯ ವಿರುದ್ಧ ಕ್ರೀಮಿನಲ್ ಮೊಕ್ಕದ್ದಮೆ ಉಡಬೇಕು ಮತ್ತು ರಾಜ್ಯದಿಂದ ಗಡಿಪಾರು ಮಾಡಬೇಕು ಒಂದು ವೇಳೆ ಕಾಮಿ ಸ್ವಾಮಿಯ ಮೇಲೆ ಕಾನೂನು ಕ್ರಮ ಜರುಗಿಸದೆ ಹೊದರೆ ಕರವೇ ಸ್ವಾಭಿಮಾನಿ ಬಣದಿಂದ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕಾ ಅಧ್ಯಕ್ಷರಾದ ನಾಗರಾಜ.ಬ ಹ್ಯಾಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನೀಲಕಂಠಪ್ಪ ಮೈಲಿ ಪ್ರ.ಕಾರ್ಯದರ್ಶೀ, ಕೊಟೇಶ ಬ ಮ್ಯಾಗಳಮನಿ ತಾ.ಯು.ಘ ಅಧ್ಯಕ್ಷರು, ಆನಂದ ಜಾಲಿಹಾಳ ನಗರ ಘಟಕ ಅಧ್ಯಕ್ಷರು, ಶಿವಣ್ಣ ಹಾದಿನಮಿ ನಗರ ಉಪಾದ್ಯಕ್ಷರು, ಮಹಾದೇವಪ್ಪ ಹುರಕಡ್ಲಿ ಕಾರ್ಯಕರ್ತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top