PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಹತ್ತಿಕಟಗಿಯವರು ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಚನ್ನಬಸನಗೌಡ ಅಲಿಪೂರ, ಕೆ.ಆರ್. ಹನುಮಂತಪ್ಪ, ರಾಮಣ್ಣ.ವಿ, ಮಲ್ಲಪ್ಪ ಕುಕನೂರ, ನಾಗರತ್ನ ಕಾರಟಗಿ, ಮತ್ತಿತರರು ಉಪಸ್ಥಿತರಿದ್ದರು. ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ಪರಿಶಿಷ್ಟಜಾತಿ/ಪರಿಶಿಷ್ಠ ಪಂಗಡದ ವಿಧ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಹತ್ತಿಕಟಗಿ ನೋಟಬುಕ್‌ಗಳನ್ನು ವಿತರಿಸಿದರು.
ಶಿಕ್ಷಕಿ ಕವಿತಾ ಕಟ್ಟಮನಿ ಸ್ವಾಗತಿಸಿದರು, ರೇಖಾ ಕುಲಕರ್ಣಿ ನಿರೂಪಿಸಿದರು. ಕೊನೆಯಲ್ಲಿ ಶೋಭಾ ಜಿ. ವಂದಿಸಿದರು.

Advertisement

0 comments:

Post a Comment

 
Top