PLEASE LOGIN TO KANNADANET.COM FOR REGULAR NEWS-UPDATES

 ನಾಡ ಹಬ್ಬ ಮೈಸೂರು ದರಸಾ ಮಹೋತ್ಸವ ೨೦೧೪ರ ದಸರಾ ಕವಿ ಗೋಷ್ಠಿಗೆ ಕನಕಗಿರಿಯ ಗಜಲ್ ಕವಿ ಅಲ್ಲಾಗಿರಿರಾಜ ಅವರು ಆಯ್ಕಯಾಗಿದ್ದಾರೆ 

ಇದೇ ತಿಂಗಳು ದಿನಾಂಕ ೩೦ರಂದು ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಜರಗುವ ದಸರಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಪ್ರಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಬಂಜಿಗೇರೆ ಜಯಪ್ರಕಾಶ ವಹಿಸಿಕೊಳ್ಳುವರು ಡಾ. ಎಚ್ ಎಲ್ ಪುಷ್ಪ ಕವಂiiತ್ರಿಯವರು ಮುಖ್ಯ ಅತಿಥಿ ಸ್ಥಾನ ವಹಿಸಿಕೊಳ್ಳುವರು ಈ ಕವಿಗೋಷ್ಠಿಯಲ್ಲಿ ಅಲ್ಲಾಗಿರಿರಾಜ್ ಕನಕಗಿರಿ ಇವರು ಗಜಲ್ ವಾಚನ ಮಾಡುವರು ಎಂದು ಮೈಸೂರು ದಸರಾ ಮಹೋತ್ಸವ ೨೦೧೪ ರ ಉಪಸಮಿತಿ ಅಧ್ಯಕ್ಷರಾದ ಪ್ರೊ.ಎಂ ಎಸ್ ಶೇಖರ್ ಕುಲಸಚಿವರು ಮೈಸೂರು ಇವರುತಿಳಿಸಿದ್ದಾರೆ  

ಮೈಸೂರು ದಸರಾ ಯುವ ಕವಿಗೋಷ್ಠಿಗೆ ಜಿಲ್ಲೆಯಿಂದ 
 ಈ ಸಾಲಿನ ಪ್ರತಿಷ್ಠಿತ ಮೈಸೂರು ದಸರಾ ಕಾರ್ಯಕ್ರಮದ ‘ಯುವಕವಿಗೋಷ್ಠಿ’ಗೆ ಜಿಲ್ಲೆಯಿಂದ ಮಹೇಶ ಬಳ್ಳಾರಿ ಆಯ್ಕೆಯಾಗಿದ್ದಾರೆ. ದಿ. ೩೦-೦೯-೨೦೧೪ ರಂದು, ಮುಂಜಾನೆ ೧೧.೩೦ ಕ್ಕೆ, ಮಾನಸ ಗಂಗೋತ್ರಿಯಲ್ಲಿ ನಡೆಯುವ ಈ ರಾಜ್ಯಮಟ್ಟದ ದಸರಾ ಯುವಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲಿದ್ದಾರೆ. ಇವರ ಆಯ್ಕೆಗೆ ಕವಿಸಮಯ ಅಭಿನಂದನೆ ಸಲ್ಲಿಸಿದೆ.


Advertisement

0 comments:

Post a Comment

 
Top