PLEASE LOGIN TO KANNADANET.COM FOR REGULAR NEWS-UPDATES



ಕುರಿಗಾಹಿ ಸುರಕ್ಷಾ ಯೋಜನೆಯಡಿಯಲ್ಲಿ ಕೊಪ್ಪಳ ತಾಲೂಕಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಕುರಿ ಅಥವಾ ಆಡಿಗೆ ತಲಾ ೩ ಸಾವಿರ ರೂ.ದಂತೆ ಪರಿಹಾರ ಧನದ ಚೆಕ್ ಅನ್ನು   ಸಂಬಂಧಪಟ್ಟವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ಶನಿವಾರದಂದು ವಿತರಿಸಿದರು.
ಕುರಿಗಾಯಿ ಸುರಕ್ಷಾ ಯೋಜನೆಯಡಿ ಆಕಸ್ಮಿಕವಾಗಿ ಕುರಿ ಸತ್ತಲ್ಲಿ, ಪ್ರತಿ ಕುರಿಗೆ ೩ ಸಾವಿರ ರೂ. ಪರಿಹಾರ ಪಡೆಯಲು ಅವಕಾಶವಿದೆ.  ತಾಲೂಕಿನ ಇಂತಹ ಒಟ್ಟು ೨೨ ಜನರಿಗೆ ಪರಿಹಾರ ಧನ ಮಂಜೂರಾಗಿದ್ದು, ಸಚಿವರು ೭ ಜನರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು.  ಈ  ಸಂದರ್ಭದಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಇಟ್ನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top