PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ವಾರ್ತಾ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜಿಲ್ಲಾ ಸ್ವಿಪ್ ಸಮಿತಿ ಕೊಪ್ಪಲ ಇವರ ಸಹಕಾರದೊಂದಿಗೆ ಮತದಾರರ ಜಾಗ್ರತಿ ಅಭಿಯಾನದಡಿಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವುದು ಸಂವಿದಾನದ ಹಕ್ಕು ನಮ್ಮ ನೈತಿಕ ಹಕ್ಕನ್ನು ಕಳೆದುಕೊಳ್ಳಬಾರದೆಂದು ಓಜನಹಳ್ಳಿಯ ಚೇತನ ಸಾಂಸ್ಕೃತಿಕ ಕಲಾತಂಡದವರಿಂದ ಮತದಾನ ಮಾಡಿದವನೆ iಹಾಶೂರನೆಂಬ ಬೀದಿನಾಟಕ ಕಾರ್ಯಕ್ರವನ್ನು ಜಿಲ್ಲೆಯ ಆಯ್ದ ಗ್ರಾಮಗಳಾದ ಭಾಗ್ಯನಗರ ಕಿನ್ನಾಳ, ಗಿಣಗೇರಾ, ಹುಲಿಗಿ, ಹೊಸಳ್ಳಿ ಕವಲೂರ, ಇಟಗಿ, ಕುಕನೂರ, ಗ್ರಾಮಗಳಲ್ಲಿ ಮಾರ್ಚ ೨೮, ೨೯, ಹಾಗೂ ಎಪ್ರೀಲ್ ೧, ೨  ದಿನಾಂಕದಂದು ಪ್ರತಿದಿನ ೨ ಕಾರ್ಯಕ್ರಮಗಳಂತೆ ೪ ದಿನ ೮ ಗ್ರಾಮಗಳಲ್ಲಿ ಪ್ರದಾರ್ಶನ ನೀಡಲಾಯಿತು. ಕಲಾ ತಂಡದ ನಾಯಕ ಶಿವಮೂರ್ತಿ ಮೇಟಿ ನೇತೃತ್ವದಲ್ಲಿ ಕಲಾವಿದರಾಗಿ ನೀಲಪ್ಪ ಮೋಟಿ, ಬಾಳಪದ್ಪ ಮೋಟಿ, ಅಂಬುಜಾ ಸಿಂದನೂರ, ಖಾದರ್ ಸಾಬ್ ನದಾಫ್, ಖರೀಮ್ ಸಾಬ್ ನದಾಫ್, ಮಹಮಮ್ಮದ ಸಾಬ್ ನದಾಫ್, ಬಾಬುಸಾಬ ಸಿಂದೋಗಿ, ರಾಮಣ್ಣ ವಾಲ್ಮೀಕಿ, ಸಂತೋಷ ಮೇಟಿ ಭಾಗವಹಿಸಿ  ಒಳ್ಳೆಯ ಅಭಿನಯದ ಮುಖಾಂತರ ಜನರಿಗೆ ಮನ ಮುಟ್ಟುವಂತೆ ಜಾಗೃತಿ ಮೂಡಿಸಲಾಯಿತು.  

Advertisement

0 comments:

Post a Comment

 
Top