PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್ (ವಿದ್ಯತ್)   ಎಮ್.ಎಸ್ ಪತ್ತಾರ ಹಾಗೂ  ಕೆ.ವಿ.ಸಿ ರಾಮಾಂಜನೆಯಲು ಇವರ ನೆತೃತ್ವದಲ್ಲಿ ಕೊಪ್ಪಳ ನಗರದಲ್ಲಿ  ಜವಹಾರ ರೋಡ್, ಅಸೋಕ ವೃತ್ತ, ಕೇಂದ್ರಿಯ ಬಸ್ ನಿಲ್ದಾಣದಲ್ಲಿ ವರಿಗೆ ಕಾಲನಡುಗೆ ಜಾಥವನ್ನು ಏರ್ಪಡಿಸಿ ಗ್ರಾಹಕರಲ್ಲಿ ವಿದ್ಯೂತ್‌ನಿಂದ ಆಗುವ ಅಪಘಾತಗಳನ್ನು ತಡೆಗಟ್ಟಲು  ಸೆರಿದ ಸಾರ್ವಜನಿಕರಿಗೆ ಮನವರಿಕೆ ಯಾಗುವಂತೆ ತಿಳಿ ಹೇಳಿದರು. ಹಾಗೂ ವಿದ್ಯೂತ್ ಸುರಕ್ಷತೆಯ ಬಗ್ಗೆ   ವಿದ್ಯೂತ್ ಅಪಘಾತಗಳು ಹಾಗೂ ಅವಗಡಗಳನ್ನು ತಪ್ಪಿಸಲು ಸಮೀಪದ ಜೆಸ್ಕಾಂ ಕಛೇರಿಗೆ ಹಾಗೂ ಗ್ರಾಹಕ ಸೇವಾ ಕೇಂದ್ರಕ್ಕೆ ತಿಳಿಸಲು ಹೇಳಿದರು.
ಈ ಜಾಥದಲ್ಲಿ ವಿಭಾಗ ಹಾಗೂ ಉಪ ವಿಭಾಗದ ಅಧಿಕಾರಿಗಳಾದ ಮಳ್ಳಿ ಶಾಮ್‌ಸುಂದರ, ಡಿ ಮಹೇಶ, ಬಿ.ಅರ್ ದೇಸಾಯಿ, ವಿರೇಶ ಯೂ, ಖಾಜಾ ಮೈನುದ್ದಿನ, ಡಿ.ರಾಘವೇಂದ್ರ,  ಹನುಮಂತಪ್ಪ, ಎಲ್ಲಾ ಶಾಖಾಧಿಕಾರಿಗಳು ಹಾಗೂ ಎಲ್ಲಾ ಜೆಸ್ಕಾಂ ನೌಕರರು ಭಾಗವಹಿಸಿದ್ದರು.  

Advertisement

0 comments:

Post a Comment

 
Top