PLEASE LOGIN TO KANNADANET.COM FOR REGULAR NEWS-UPDATES

 ಭರತ ನಾಟ್ಯದಲ್ಲಿ ವಿದ್ವತ ಪದವಿ ಪಡೆದ ನೃತ್ಯ ಶಿಕ್ಷಕಿ, ನಿರ್ದೇಶಕಿ ತಳಕಲ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಕೆ.ಜಿ.ಕವಿತಾ ಗಣೇಶ ರವರಿಗೆ ಕೀನ್ಯಾ ವಿಶ್ವ ಸಂಸ್ಕೃತಿ ಸಮ್ಮೇಳನಕ್ಕೆ ಆಹ್ವಾನಿಸಿ ನೃತ್ಯ ಪ್ರದರ್ಶನಕ್ಕೆ ಕೊರಿದ್ದಾರೆ ಎಂದು ಶಿಕ್ಷಕಿ ಕೆ.ಜಿ.ಕವಿತಾ ಗಣೇಶ ತಿಳಿಸಿದ್ದಾರೆ.
ಈ ಕುರಿತು ಅವರು ಪ್ರಕಟಣೆ ನೀಡಿ, ಮಂಗಳೂರು ಹೃದಯವಾಹಿನಿ ಬಳಗ ಮತ್ತು ಕನ್ನಡ ಸಾಂಸ್ಕೃತಿಕ ಸಂಘ ಕೀನ್ಯಾ ಇವರ ಸಂಯುಕ್ತಾಶ್ರಯದಲ್ಲಿ ನೈರೋಬಿಯಾದ ಓಸ್ವಾಲ್ ಸೆಂಟರ್ ಸಭಾಂಗಣದಲ್ಲಿ ಮಾರ್ಚ ೧ ಮತ್ತು ೨ ರಂದು  ೨ ದಿನಗಳ ಕಾಲ ೧೦ ನೇ ವಿಶ್ವ ಕನ್ನಡ ಸಂಸ್ಕೃತಿ ಸಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳದಲ್ಲಿ ಉದ್ಯಮ ಗೋಷ್ಠಿ, ಕವಿ ಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಕೆ.ಜಿ. ಕವಿತಾಗಣೇಶ ರವರು ನೃತ್ಯ ಪ್ರದರ್ಶನ ನೀಡಲು ಇದೇ ದಿ.೨೭ ರಂದು ವಿದೇಶಿ ಪ್ರವಾಸ ಕೈಗೊಂಡಿದ್ದಾರೆ.  

Advertisement

0 comments:

Post a Comment

 
Top