ಪ್ಲಾಟ್ಫಾರ್ಮ್-೨, ಮೇಲುಸೇತುವೆ (ಫುಟ್ ಓವರ್ ಬ್ರಿಡ್ಜ್) ನಿರ್ಮಿಸಬೇಕು. ಟಿಕೇಟ್ ನೀಡುವ ಹೆಚ್ಚುವರಿ ಕೌಂಟರ್ ಪ್ರಾರಂಭಿಸಿದ್ದು. ಸಿಬ್ಬಂದಿ ಕೊರತೆಯಿಂದ ಅದು ಸುಮಾರು ದಿನಗಳಿಂದ ಬಂದಾಗಿದೆ. ಶುದ್ಧ ಕುಡಿಯುವ ಸಿಹಿ ನೀರು ಪೂರೈಕೆ, ಪಾರ್ಕಿಂಗ್ ಜಾಗ ವಿಸ್ತರ್ಣೆ, ಆಟೋ ರಿಕ್ಷಾ ನಿಲ್ದಾಣ, ಸಿ.ಟಿ. ಬಸ್ ನಿಲ್ದಾಣ ವಿಸ್ತರ್ಣೆ, ಪ್ರಯಾಣಿಕರಿಗೆ ವಿಶ್ರಾಂತಿ ಗೃಹ, ಮೂತ್ರಾಲಯ, ಶೌಚಾಲಯ ವ್ಯವಸ್ಥೆ ಮಂದಗತಿಯಲ್ಲಿ ಸಾಗಿದ್ದು, ತೀವ್ರಗೊಳಿಸಬೇಕು, ಡಿಜಿಟಲ್ ಕೋಚ್ ಪೋಜಿಶನ್ (ಯಾವ ಗಾಡಿಯ ಬೋಗಿ ಎಲ್ಲಿ ಬಂದು ನಿಲ್ಲುತ್ತದೆಂಬ ಸೂಚಿಸುವ ವ್ಯವಸ್ಥೆ) ಶೆಲ್ಟರ್ ವಿಸ್ತರ್ಣೆ (ಮೇಲ ಛಾವಣಿ), ಹೊಸ ಮಾದರಿಯ ವಸತಿ ಗೃಹಗಳ ನಿರ್ಮಾಣ, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಬೇಕು, ರೈಲ್ವೆ ನಿಲ್ದಾಣ ಆರಂಭವಾದಾಗ ಮಂಜೂರಾದ ಸಂಖ್ಯೆ ಕೇವಲ ೩ ಜನ ಪೊಲೀಸ್ರು ಇನ್ನೂವರೆಗೂ ಮುಂದುವರೆದಿದೆ. ಜಿಲ್ಲಾ ಸ್ಥಳವಾಗಿರುವ ಕೊಪ್ಪಳ ರೈಲ್ವೆ ನಿಲ್ದಾಣ ರೈಲ್ವೆ ಪೊಲೀಸ್ ಔಟ್ ಪೋಸ್ಟ್ ಮೇಲ್ದರ್ಜೆಗೆರಿಸಿ ಹೆಚ್ಚಿನ ಸಿಬ್ಬಂದಿ ಒದಗಿಸಬೇಕು. ನಿಲ್ದಾಣ ಮುಂದೆ ಸ್ವಾಗತ ಕಮಾನ ಫಲಕ ನಿರ್ಮಿಸಿ, ರೈಲ್ವೆ ನಿಲ್ದಾಣವನ್ನು ಆಧುನಿಕರಣಗೊಳಿಸಬೇಕು.
ಸುಮಾರು ಎರಡು ದಶಕಗಳನ್ನು ಕಳೆದರೂ ಗಿಣಗೇರಾ ಮಹೆಬೂಬ ನಗರ ಹೊಸ ರೈಲು ಮಾರ್ಗ, ಗದಗ-ವಾಡಿ ಹೊಸ ಮಾರ್ಗ ಈ ಎರಡು ಯೋಜನೆ ನಿರ್ಮಾಣ ಕಾಮಗಾರಿ ಅನೇಕ ನೆಪಗಳನ್ನು ಹೇಳುತ್ತ ಕುಂಟುತ್ತ ಸಾಗಿದ್ದನ್ನು ಮತ್ತು ಹೊಸಪೇಟೆ-ಲೋಂಡ ರೈಲು ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಹುಬ್ಬಳ್ಳಿ ಹತ್ತಿರದ ಹೆಬಸೂರದಿಂದ ಹೊಸಪೇಟೆವರೆಗೆ ಕೆಲಸ ಆಮೆಗತಿಯಲ್ಲಿ ನಡೆದಿದೆ. ಇವುಗಳನ್ನು ಕಾಲಮಿತಿ ಯೋಜನೆಯಲ್ಲಿ ತೆಗೆದುಕೊಂಡು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು.
ಹೆಚ್ಚುವರಿ ರೈಲುಗಳನ್ನು ಬಿಜಾಪೂರ-ಗುಂತಕಲ್, ವಾಯ ಗದಗ, ಕೊಪ್ಪಳ, ಬಳ್ಳಾರಿ ಮಾರ್ಗವಾಗಿ, ಮದ್ರಾಸ-ಬಾಂಬೆ (ವಾಯ ಗುಂತಕಲ್, ಬಳ್ಳಾರಿ, ಕೊಪ್ಪಳ, ಗದಗ, ಬಿಜಾಪೂರ ಮಾರ್ಗವಾಗಿ ಸಂಚರಿಸಲಿ) ಸೋಲಾಪೂರ-ಗುಂತಕಲ್, (ವಾಯ ಗದಗ, ಕೊಪ್ಪಳ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿ) ಬಿಜಾಪೂರ-ಬಳ್ಳಾರಿ ಇಂಟರ್ಸಿಟಿ ರೈಲು (ವಾಯ ಗದಗ, ಕೊಪ್ಪಳ-ಹೊಸಪೇಟೆ ಮಾರ್ಗವಾಗಿ ಸಂಚರಿಸಲಿ), ಅಮರಾವತಿ ಎಕ್ಸಪ್ರೇಸ್ (ಗಾಡಿ ಸಂಖ್ಯೆ ೧೭೨೨೫), ವಿಜಯವಾಡ-ಹುಬ್ಬಳ್ಳಿ ರೈಲನ್ನು ಭಾನುವಾರ, ಮಂಗಳವಾರ, ಶುಕ್ರವಾರ ಹುಬ್ಬಳ್ಳಿಯಲ್ಲಿ ಸುಮಾರು ೨೪ ತಾಸಿಗೂ ಹೆಚ್ಚು ಕಾಲ ನಿಲ್ಲುತ್ತಿದ್ದು, ಸದರಿ ರೈಲನ್ನು ಹುಬ್ಬಳ್ಳಿ-ಚಿತ್ರದುರ್ಗಾ ವಾಯ ಗದಗ, ಕೊಪ್ಪಳ, ಹೊಸಪೇಟೆ ಬಳ್ಳಾರಿ ಮಾರ್ಗವಾಗಿ ಇಂಟರ್ಸಿಟಿ ರೈಲನ್ನಾಗಿ ಓಡಿಸುವದು, ವಾಸ್ಕೋ-ಮದ್ರಾಸ (ಚೆನ್ನೈ) ವಾಯ ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಸಂಚರಿಸಲಿ, ವರ್ತುಲ ರೈಲು ಗುಲ್ಬರ್ಗಾ, ವಾಡಿ, ರಾಯಚೂರು, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಬಾಗಲಕೋಟೆ, ಬಿಜಾಪೂರ, ಸೋಲಾಪೂರ, ಗುಲ್ಬರ್ಗಾ, ವರ್ತುಲ ಮಾರ್ಗವಾಗಿ ಸಂಚಲಿಸಬೇಕು, ಈ ಭಾಗದಲ್ಲಿ ಸಂಚರಿಸುವ ಎಲ್ಲ ರೈಲುಗಳ ಮುಂದೆ, ಮಧ್ಯ ಹಾಗೂ ಹಿಂದೆ ಭಾಗಗಳಲ್ಲಿ ಈಗಿರುವ ಸಂಖ್ಯೆಗಳಕ್ಕಿಂತ ಎರಡುಪಟ್ಟು ಹೆಚ್ಚಿಸಿ ಜನರಲ್ ಬೋಗಿಗಳನ್ನು ಅಳವಡಿಸಬೇಕು. ಅಂದರೆ ಒಂದು ಎಕ್ಸಪ್ರೇಸ್ ರೈಲಿಗೆ ಕನಿಷ್ಟ ೧೨ ಜನರಲ್ ಬೋಗಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯವಿದ್ದ ಕಡೆಗಳೆಲ್ಲೆಲ್ಲಾ ಮ್ಯಾನವಲ್ ಗೇಟ್ ನಿರ್ಮಿಸಬೇಕು. ಈ ಭಾಗದಲ್ಲಿ ಸಂಚರಿಸುವ ರೈಲುಗಳನ್ನು ಸಮಯ ಹೊಂದಾಣಿಕೆ ಮಾಡಿಕೊಂಡು ಸಂಚರಿಸಿದರೆ ಈ ಭಾಗದ ಜಿಲ್ಲೆಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತದೆ. ಕೊಪ್ಪಳ ನಗರದ ಗೇಟ್ ಸಂಖ್ಯೆ ೬೨ ಮತ್ತು ೬೪ ಮೇಲುಸೇತುವೆ / ಕೆಳ ಸೇತುವೆಗಳು ತ್ವರಿತಗತಿಯಲ್ಲಿ ನಿರ್ಮಿಸುವದು, ಯಲಬುರ್ಗಾದಿಂದ ಜಿಲ್ಲಾ ಕೇಂದ್ರವಾದ ಕೊಪ್ಪಳಕ್ಕೆ ಸಂಪರ್ಕ ಹೊಂದಿರುವ ಭಾನಾಪೂರ ರೈಲ್ವೆ ಗೇಟ್ ಕಳೆ ಸೇತುವೆ ನಿರ್ಮಿಸಬೇಕು.
ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖಗ್ಗೆ ಅವರಿಗೆ ಕೊಪ್ಪಳ ರೈಲ್ವೆ ನಿಲ್ದಾಣದ ಪ್ರಬಂಧಕರಾದ ಪ್ರಭುಸ್ವಾಮಿ ಅವರ ಮೂಲಕ ರೈಲ್ವೆ ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎ. ಗಫಾರ್ ಮನವಿ ಪತ್ರ ಅರ್ಪಿಸಿದರು. ಧರಣಿ ನೇತೃತ್ವವವನ್ನು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ್, ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ತಾಲೂಕಾ ಸಂಚಾಲಕ ನೂರಸಾಬ ಹೊಸಮನಿ, ಚಿನ್ನುಸಾಬ ಹೊಸಮನಿ, ಶಿವಮ್ಮ ಕಾಮನೂರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ತಿಪ್ಪಯ್ಯಸ್ವಾಮಿ ಹಿರೇಮಠ, ತಾಲೂಕಾ ಮಾಜಿ ಅಧ್ಯಕ್ಷ ಭೀಮಸೇನ ಕಲಕೇರಿ, ನನ್ನುಸಾಬ ನೀಲಿ, ಆದರ್ಶ ಕುಸ್ತಿ ಕೀಡಾಪಟುಗಳ ಸಂಘದ ಅಧ್ಯಕ್ಷ ಜಾಫರ್ಅಲಿ ಪೈಲ್ವಾನ್, ಎಸ್.ಜೆ.ಕೆ. ಸಂಚಾಲಕ ಅಬ್ದಲ್ವಹಾಬ್ ರಾಟಿ, ಎಐಟಿಯುಸಿ ಮುಖಂಡರಾದ ಮಖಬೂಲ್ ರಾಯಚೂರ, ಶಿವಪ್ಪ ಹಡಪದ, ಸೋಮಶೇಖರ ಲೇಬಗೇರಿ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಈರಪ್ಪ ಡೊಳ್ಳಿನ್, ಈರಪ್ಪ ಜಾಕ್ರಿ ಮತ್ತಿತರರು ಭಾಗವಹಿಸಿದ್ದರು.
0 comments:
Post a Comment