ಕೊಪ್ಪಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ನೇಮಕಗೊಳಿಸಲಾಗಿದೆ. ಗೌರವ ಕಾರ್ಯದರ್ಶಿಗಳಾಗಿ ಡಾ. ಪ್ರಕಾಶ ಬಳ್ಳಾರಿ, ಹುಸೇನಪಾಶಾ ; ಗೌರವ ಕೋಶಾಧ್ಯಕ್ಷರಾಗಿ ಮೈಲಾರಗೌಡ ಹೊಸಮನಿ, ಮಹಿಳಾಪ್ರತಿನಿಧಿಯಾಗಿ ಅಂಜನಾದೇವಿ ಕಲ್ಲೂರಕರ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರತಿನಿಧಿಯಾಗಿ ವೀರಣ್ಣ ಬಂಡಿ, ಸಂಘ-ಸಂಸ್ಥೆ ಪ್ರತಿನಿಧಿಯಾಗಿ ಪ್ರಲ್ಹಾದ ಅಗಳಿ, ಕಾರ್ಯಕಾರಿಣಿ ಸದಸ್ಯರಾಗಿ ಬಸವರಾಜ ಪಾಟೀಲ, ಗವಿಸಿದ್ದಪ್ಪ ಬಾರಕೇರ, ಪದಮಚಂದ್ ಚಂಪಾಲಾಲ್ ಮೆಹತಾ, ಕಿಶನ್ ಗೋಪಾಲ ಜಾಜು, ಅರುಣಾ ನರೇಂದ್ರ ಅನಸೂಯಾ ಜಾಗೀರದಾರ, ಅಲ್ಲದೇ ಗೌರವ ಸಲಹೆಗಾರರಾಗಿ ದಾನಪ್ಪ ಜಿ.ಕೆ, ಡಿ.ಎಂ. ಬಡಿಗೇರ, ಡಾ.ಕೆ.ಎಸ್. ರಾಮು, ಡಾ. ಶ್ರೀನಿವಾಸ ಹನಸಿ ಮತ್ತು ಸರೋಜಾ ಬಾಕಳೆ ಇವರನ್ನು ನೇಮಕಗೊಳಿಸಲಾಗಿದೆ ಎಂದು ನೂತನ ತಾಲೂಕಾ ಕ.ಸಾ.ಪ ಅಧ್ಯಕ್ಷ ಶಿ.ಕಾ ಬಡಿಗೇರ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment