PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ೦೩: ನಗರದ ಎಲ್ಲಾ ಮಸೀದಿಗಳಿಗೆ ಭೇಟಿ ನೀಡಿ ರಂಜಾನ್ ಉಪವಾಸ ಆಚರಣೆ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಮಾತನಾಡಿದ ಅವರು ರಂಜಾನ್ ಉಪವಾಸ ಆಚರಣೆಯು ಮನುಷ್ಯನನ್ನ ಆಧ್ಯತ್ಮೀಕಗೊಳಿಸಿ ಹಸಿವಿನ ಪರಿಯನ್ನು ಗೊತ್ತು ಗೊಳಿಸಿ ದೀನ ದಲಿತರ ಬಡವರ ಸಂಕಷ್ಟಗಳ ಬಗ್ಗೆ ಅರಿವು ಮೂಡಿಸುತ್ತದೆ. ಅದಕ್ಕಾಗಿಯೇ ಇ
ಸ್ಲಾಂ ಧರ್ಮದಲ್ಲಿ ಈ ಪವಿತ್ರ ರಂಜಾನ್ ತಿಂಗಳರಲ್ಲಿ ಮುಸ್ಲೀಂ ಬಾಂಧವರಿಗೆ ಕಡ್ಡಾಯವಾಗಿ ಜಕಾತ್ (ದಾನ) ಫಿತ್ರಾ (ದವಸ ಧಾನ್ಯ)ಗಳನ್ನು ಹಂಚುವುದು ಕಡ್ಡಾಯ ಮಾಡಲಾಗಿದೆ. ಇದರಿಂದ ಬಡವರು ಸಹಾ ಹಬ್ಬದ ಆಚರಣೆಯಲ್ಲಿ ಹರುಷದಿಂದ ಇದ್ದು ಹಬ್ಬದ ಸುಖ ಸಂತೋಷಗಳನ್ನು ಆನಂದಿಸಲು ಇಸ್ಲಾಂ ಧರ್ಮದಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆಂಕನಗೌಡ್ರ ಹಿರೇಗೌಡ್ರ, ಅಮ್ಜದ್ ಪಟೇಲ್, ರಾಜಣ್ಣ ಹಿಟ್ನಾಳ, ಯಮನೂರಪ್ಪ ನಾಯಕ, ಕಾಟನ್‌ಪಾಷಾ,ಮಹೇಶ ಭಜಂತ್ರಿ, ಮಲ್ಲಪ್ಪ ಕವಲೂರು, ಮಾನ್ವಿಪಾಷಾ, ರಾಮಣ್ಣ ಹದ್ದಿನ, ಮೌಲಾಹುಸೇನ್ ಜಮಾದಾರ, ರಾಮಣ್ಣ ಹಳ್ಳಿಗುಡಿ, ಯಮನೂರಪ್ಪ ನಾಯಕ, ಇಬ್ರಾಹಿಮ್ ಅಡ್ಡೇವಾಲೆ, ಅಬ್ದುಲ್ ಅಝಿಜ್, ಆಸಿಫ್ ಕರ್ಕಿಹಳ್ಳಿ, ಯುಸುಫ್ ಅಲಿ, ಜಾಫರ್ ಸಂಗಟಿ, ನವಾಜ್ ಹುಸೇನಿ, ಪರವೇಜ್ ಖಾದ್ರಿ, ಜುಬೇರ್ ಹುಸೇನಿ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದು.

Advertisement

0 comments:

Post a Comment

 
Top