PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಗೆ ಬರುವ ಡಾ|| ಬಿ.ಆರ್.ಅಂಬೇಡ್ಕರ್ ಸಮೂದಾಯ ಭವನಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಶಂಕುಸ್ಥಾಪನೆ ನೆರವೇರಿಸಿದರು.  
 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಟಗಿಯ ಶ್ರೀ ಶಿವಶರಣ ಗದಿಗೆಪ್ಪ ಅಜ್ಜನವರ ಅವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತೂರು ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಿದೇವಿ ಮಾರುತೆಪ್ಪ ಅಂಬಿಗೇರ ಅವರು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ನಾಗನಗೌಡ ಮಾಲಿ ಪಾಟೀಲ್, ತಾ.ಪಂ. ಸದಸ್ಯ ಸಂಗಪ್ಪ ಕವಲೂರು, ಗೂಳಪ್ಪ ಹಲಗೇರಿ, ಹೇಮಣ್ಣ ಅಗಸಿಮನಿ, ಮಾರುತಿ ಕುಂಟಮ್ಮನವರ, ಗ್ರಾ.ಪಂ.ಸದಸ್ಯೆ ಶಾಂತಮ್ಮ ಬಿ.ಕುಂಟಗೇರಿ, ಅಂಬೇಡ್ಕರ್ ಯುವಜನ ಕಲಾ ಸಂಘದ ಅಧ್ಯಕ್ಷ ದೇವಪ್ಪ ಹರಿಜನ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ, ತಾಲೂಕ ಕ್ರೀಡಾಧಿಕಾರಿ ಎನ್.ಎಸ್.ಪಾಟೀಲ್, ಅಂದಪ್ಪ ಮೋರನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top