PLEASE LOGIN TO KANNADANET.COM FOR REGULAR NEWS-UPDATES


ಬಿಜಾಪೂರದಲ್ಲಿ ನಡೆದ ಅಖಿಲ ಭಾರತ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಬಗೇರಿ ಪ್ರೌಢಶಾಲೆಯ ಕಲೆ, ಸಾಹಿತ್ಯ ಸಾಂಸ್ಕೃತಿಕ ವೆದಿಕೆ ಹಾಗೂ ಕೊಪ್ಪಳದ ಅರಳು ಪ್ರಕಾಶನದ ಸಹಯೋಗದಲ್ಲಿ ಶಿಕ್ಷಕ ಎ.ಪಿ. ಅಂಗಡಿಯವರ ಯಶಸ್ವಿ ೧೩೪ನೇ ಕಲಾ ಪ್ರದರ್ಶನ ಜರುಗಿತು. ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ವಿಸ್ಮಯ ಹಾಗೂ ಕ್ರಿಯಾತ್ಮಕವಾದ ಅಂಟಿಸದೆ, ಬಿಡಿ ಭಾಗಗಳನ್ನು ಸೇರಿಸದೆ ಒಂದೇ ಕಾರ್ಡಿನಲ್ಲಿ ರಚಿಸುವ ಗುಟ್ಟುರಟ್ಟು ಕಲಾಕೃತಿಗಳನ್ನು ವೀಕ್ಷಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ   ಬಿ.ಟಿ.ಲಲಿತಾನಾಯಕ ಹಾಗೂ ಇತರರು ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು, ಕೊಪ್ಪಳ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ  ವೀರಣ್ಣ ನಿಂಗೋಜಿ, ಎಸ್, ಬಿ, ಗೊಂಡಬಾಳ, ರಾಮಣ್ಣ ಬುರಡಿ, ಅಮರೇಶ ತಟ್ಟಿ ಮುಂತಾದವರು ಉಪಸ್ಥಿತರಿದ್ದರು. 


Advertisement

0 comments:

Post a Comment

 
Top