PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ.  : ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ ೩೧ ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಸದ್ಯ ಈ ದಿನಾಂಕವನ್ನು ನವೆಂಬರ್ ೧೫ ರವರೆಗೆ  ವಿಸ್ತರಿಸಲಾಗಿದೆ.
ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ  ೨೦೧೨ ರ ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವ ದಿನಾಂಕವನ್ನು  ಅಕ್ಟೋಬರ್ ೩೧ ಕ್ಕೆ ನಿಗಡಿಪಡಿಸಲಾಗಿತ್ತು, ಆದರೆ, ನವೋದಯ ವಿದ್ಯಾಲಯ ಸಮಿತಿ, ಹೈದ್ರಾಬಾದ್ ವಲಯ ಇವರ ಆದೇಶದ ಮೇರೆಗೆ ನವೆಂಬರ್ ೧೫ ರವರೆಗೆ ವಿಸ್ತರಿಸಲಾಗಿದೆ. 
ಹೆಚ್ಚಿನ ವಿವರಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಅಥವಾ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ ಕುಕನೂರ ದೂರವಾಣಿ ಸಂಖ್ಯೆ : ೦೮೫೩೪-೨೩೦೪೪೪ ಇವರನ್ನು ಸಂಪರ್ಕಿಸಬಹುದು ಎಂದು ವಿದ್ಯಾಲಯದ ಪ್ರಾಚಾರ್ಯರು ಡಿ. ಶ್ಯಾಂ ಪ್ರಕಾಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top