PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ಇವರಿಂದ ಇಪ್ತಿಹಾರ್ ಕೂಟವನ್ನು ಏರ್ಪಡಿಸಿದ್ದರು. ಇಪ್ತಿಹಾರ್ ಕೂಟದಲ್ಲಿ ವಿವಿಧ ಪಕ್ಷಗಳ ಮುಖಂಡರು,ನಗರದ ಗಣ್ಯರು,ವರ್ತಕರು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಯ್ಯದ್ ಪೌಂಡೇಷನ್‌ನ ಅಧ್ಯಕ್ಷರಾದ ಕೆ.ಎಂ.ಸಯ್ಯದ್, ಸೈಯದ್ ಅಭಿಮಾನಿ ಬಳಗದ ಅಧ್ಯಕ್ಷ ಸೈಯದ್ ಹಜ್ರತ್ ಖಾದ್ರಿ ಸೇರಿದಂತೆ ಪದಾಧಿಕಾರಿಗಳು,ಅಭಿಮಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top