PLEASE LOGIN TO KANNADANET.COM FOR REGULAR NEWS-UPDATES






ಕೊಪ್ಪಳ : ನಗರದಲ್ಲಿ 12ರಂದು ಸಾಚಾರ್ ಕಮಿಟಿಯ ವರದಿ ಮತ್ತು ಮುಸ್ಲಿಂರ ಸ್ಥಿತಿಗತಿಗಳು ಕುರಿತು ಒಂದು ದಿನದ ವಿಚಾರ್ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಪೋಲೀಸ್ ಭವನದಲ್ಲಿ ಫೆಧಿನಾ ಎಂಬ ಎನ್ ಜಿಓದ ಸಹಯೋಗದೊಂದಿಗೆ ಸ್ಥಳೀಯ ಕೆಲವು ಸಂಘಟನೆಗಳು ಸೇರಿಕೊಂಡು ಈ ಕಾರ್ಯಕ್ರಮವನ್ನು ರೂಪಿಸಿದ್ದರು. ಉತ್ತರ ಕರ್ನಾಟಕ ವಲಯ ಮಟ್ಟದ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಶಿಬಿರಾರ್ಥಿಗಳು ಸ್ಥಳೀಯ ಮುಸ್ಲಿಂ ನಾಯಕರು,ಆಸಕ್ತರು, ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗುಲಾಂ ಎಂ.ಗೌಸ್ ಸಾಲಾರ್ ಪತ್ರಿಕೆಯ ಅಂಕಣಕಾರರು, ತನ್ವೀರ್ ಅಹ್ಮದ್ ಕರ್ನಾಟಕ ಮುಸ್ಲಿಂ.ಕಾಂ ಸಂಪಾದಕರು,ಪ್ರಭುಗೌಡ ,ಅಮ್ತೂರ್ ರೆಹಮಾನ್ , ರಾಜಾಬಕ್ಷಿ ಹೆಚ್.ವಿ.ಮೌಲಾಹುಸೇನ್ ಬುಲ್ಡಿಯಾರ್ ಸೇರಿದಂತೆ ಅನೇಕರು ಮಾತನಾಡಿದರು. ನಂತರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

0 comments:

Post a Comment

 
Top