PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕೊಪ್ಪಳದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅಗಲೀಕರಣಕ್ಕೆ ಆಗ್ರಹಿಸಿ ಕೊಪ್ಪಳದ ಪ್ರಗತಿಪರ ಸಂಘಟನೆಗಳ ಮುಖಂಡರು ಸರಕಾರಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಭಾರಿ ಜಿಲ್ಲಾಧಿಕಾರಿ ಮಂಜುನಾಥರ ಮೂಲಕ ಮನವಿ ಸಲ್ಲಿಸಿದ ಮುಖಂಡರು ನಗರದ ಎನ್ ಎಚ್ 63 ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು , ಶ್ರೀಮಂತರು, ಹೆದ್ದಾರಿಯನ್ನು ಅತಿಕ್ರಮಿಸಿ ಮಳಿಗೆಗಳನ್ನು ಕಟ್ಟಿಕೊಂಡವರು ಹೊರತು ಸಾಮಾನ್ಯ ನಾಗರಿಕರಲ್ಲ. ಅವರ ಲಾಬಿಗೆ ಸರಕಾರ ಮಣಿಯಬಾರದೆಂದು ಆಗ್ರಹಿಸಿದರು. ನಗರದ ಎರಡು ಮುಖ್ಯ ರಸ್ತೆಗಳ ಅಗಲೀಕರಣದ ಸಮಯದಲ್ಲಿ ಯಾವ ಒತ್ತಡಕ್ಕೂ ಮಣಿಯದ ಸರಕಾರ, ಜಿಲ್ಲಾಡಳಿತ ಈ ಎನ್ ಎಚ್ 63ರ ಅಗಲೀಕರಣಕ್ಕೆ ಮೀನ ಮೇಷ ಎಣಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

Advertisement

0 comments:

Post a Comment

 
Top