PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-30-  ಹಿರಿಯ ಕವಯತ್ರಿ ಅನುಸೂಯಾ ಜಹಗೀರದಾರರ  ಪ್ರಥಮ ಕವನಸಂಕಲನ ಒಡಲ ಬೆಂಕಿ ಬೆಳಗಾವಿಯ ಡಾ.ಡಿ.ಎಸ್.ಕರ್ಕಿ ಪ್ರತಿಷ್ಠಾನದ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಂದಿನ ತಿಂಗಳು ೧೫ರಂದು ಬೆಳಗಾವಿಯಲ್ಲಿ  ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡ
ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ಅನುಸೂಯಾ ಜಹಗೀರದಾರರಿಗೆ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಬಳಗ ಅಭಿನಂದಿಸಿದೆ. ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಮಹೇಶ ಬಳ್ಳಾರಿ, ಸಿರಾಜ್ ಬಿಸರಳ್ಳಿ,  ಶಾಂತಾದೇವಿ ಹಿರೇಮಠ, ವಿಜಯಲಕ್ಷ್ಮೀ ಕೊಟಗಿ, ಹೆಚ್.ಎಸ್.ಪಾಟೀಲ್,  ಪುಷ್ಪಲತಾ ಏಳುಬಾವಿ, ವಿಮಲಾ ಇನಾಂದಾರ, ಸುಮತಿ ಹಿರೇಮಠ, ಶ್ರೀನಿವಾಸ ಚಿತ್ರಗಾರ, ಬಸವರಾಜ ಸಂಕನಗೌಡರ,  ಶಿವಾನಂದ ಹೊದ್ಲೂರ, ವೀರಣ್ಣ ಹುರಕಡ್ಲಿ,ಲಲಿತಾ ಭಾವಿಕಟ್ಟಿ, ಡಾ.ಮಮತಾಜ್ ಬಿರಾದಾರ್. ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ , ಹೆಚ್.ವಿ.ರಾಜಾಬಕ್ಷಿ ಸೇರಿದಂತೆ ಇತರರು ಅಭಿನಂದಿಸಿ ಕನ್ನಡ ಸಾಹಿತ್ಯಕ್ಕೆ ಅವರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ ಎಂದು ಹಾರೈಸಿದ್ದಾರೆ. 
ಲಾಗುವುದು.

Advertisement

0 comments:

Post a Comment

 
Top