PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ೨೧: ಮಹಾತ್ಮ ಜ್ಯೋತಿಬಾ ಫುಲೆ ಅವರ ೧೮೮ನೇ ಜನ್ಮದಿನಾಚರಣೆ ಅಂಗವಾಗಿ ಭಾರತೀಯ ದಲಿತ ಪ್ಯಾಂಥರ್ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ  ಶನಿವಾರ ಜಿಲ್ಲಾಧ್ಯಕ್ಷ ನಾಗರಾಜ್ ಬೆಲ್ಲದ್ ನೇತೃತ್ವದಲ್ಲಿ
ನಗರದ ೧೨ನೇ ವಾರ್ಡನಲ್ಲಿರುವ ಡಾ| ಅಂಬೇಡ್ಕರ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ,  ನೊಟ್ ಬುಕ್ ಹಾಗೂ ಸಿಹಿ ವಿತರಿಸಿ ಜೋತಿಬಾ ಫುಲೆ ಅವರ ೧೮೮ ನೇ ಜನ್ಮದಿನಾಚರಣೆ ಆಚರಿಸಲಾಯಿತು.
          ಈ ವೇಳೆ ಸಂಘಟನೆಯ ನಗರ ಘಟಕ ಪದಾಧಿಕಾರಿಗಳಾದ ಮಂಜುನಾಥ ದೊಡ್ಡಮನಿ, ಗೌತಮ್ ಬಳಗಾನೂರ, ರಾಘು ಚಾಕ್ರಿ, ಶರಣ ಬೆಲ್ಲದ, ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು.  

Advertisement

0 comments:

Post a Comment

 
Top