PLEASE LOGIN TO KANNADANET.COM FOR REGULAR NEWS-UPDATES

ವೈಧ್ಯಕೀಯ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲಕ್ಕಾಗಿ ತಮ್ಮ ದೇಹವನ್ನು ಬಳ್ಳಾರಿಯ ವಿಜಯನಗರ ವೈಧ್ಯಕೀಯ ಕಾಲೇಜ್(ವಿಮ್ಸ್)ಗೆ ದಾನಮಾಡಿರುವ ಪ್ರಗತಿಪರರು ಮತ್ತು ಚಳುವಳಿಗಾರರಾದ ಕಾಮ್ರೇಡ್ ಭಾರದ್ವಾಜ್‌ರವರ ವಿಚಾರವನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘ, ಸ್ಲಂಜನರ ಸಾಂಸ್ಕೃತಿಕ ಪ್ರತಿಭಾ ಪ್ರತಿಷ್ಠಾನ, ಏಐಸಿಸಿಟಿಯು ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆಯ ಮುಖಂಡರು ಮತ್ತು ಸರ್ವ ಸದಸ್ಯರು ಸ್ವಾಗತಿಸಿದ್ದಾರೆ.
ನಗರದ ಬಸ್‌ಸ್ಟ್ಯಾಂಡ ಹತ್ತಿರದ ಕ್ರಾಂತಿ ಕೇಂದ್ರದಲ್ಲಿ ಸಭೆ ಸೇರಿದ ವಿವಿಧ ಸಂಘಟನೆಯ ಮುಖಂಡರುಗಳು ಸಭೆಯಲ್ಲಿ ಭಾರದ್ವಾಜ್‌ರವರ ದೇಹದಾನದ ಕುರಿತು ಮಾತನಾಡುತ್ತ, ದುಡಿಯುವ ವರ್ಗದವರ ಪರವಾಗಿ ಒಬ್ಬ ಚಳುವಳಿಗಾರನಾಗಿ ಹಾಗೂ ಮಾಧ್ಯಮದಲ್ಲಿ ಕೂಡ ತಮ್ಮದೇ ಸೇವೆ ಸಲ್ಲಿಸುತ್ತಿರುವ ಅವರು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ತಮ್ಮ ದೇಹವನ್ನು ದಾನವಾಗಿ ನೀಡಿರುವ ಸಮಾಜಕ್ಕೆ ವಿಶಷ ಸಂದೇಶ ನೀಡಿದಂತಾಗಿದೆ ಎಂದು ಸಾಹಿತಿ ಅಲ್ಲಾಗಿರಿರಾಜ್ ಕನಕಗಿರಿ ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಸಾಹಿತಿ ಪೀರ್‌ಬಾಷಾ, ಎಂ. ವಿರುಪಕ್ಷಪ್ಪ, ಬಸನಗೌಡ, ಟಿ. ರಾಘವೇಂದ್ರ, ಕೆ.ಬಿ. ಪಾಟೀಲ್, ತಿಪ್ಪೇಸ್ವಾಮಿ ನವಲಿ, ಮಾಬುಸಾಬ್, ಸೈಯ್ಯದ್ ಹಾಷುಮುದೀನ್, ಹಕೀಮ್ ಹುಸೇನ್, ಮಂಜುನಾಥ್, ಬಾಷು ಮತ್ತಿತರರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top