PLEASE LOGIN TO KANNADANET.COM FOR REGULAR NEWS-UPDATES

ವಿದ್ಯಾರ್ಥಿಗಳ ಸೂಕ್ತ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರಿಗೆ  ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕರೆ

ಕೊಪ್ಪಳ : ದಿ.೧೯ರಂದು   ಭಾಗ್ಯನಗರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಗೆ ತಕ್ಕಂತೆ ಶಿಕ್ಷಣ ಹಾಗೂ ಕ್ರೀಡಾ ಆಸಕ್ತಿಯನ್ನು ಶಿಕ್ಷಕರು ಬೆಳಸಬೇಕು ಮಕ್ಕಳಿಗೆ ಶಿಕ್ಷಣವು ಹೊರೆಯಾಗದಂತೆ ಅವರನ್ನು ಪ್ರೋತ್ಸಾಹಿಸಿ ವಿದ್ಯಾರ್ಜನೆಯನ್ನು ಮಾಡಬೇಕು. ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣದ ಜೋತೆಯಲ್ಲಿ ಕ್ರೀಡಾ ಹವ್ಯಾಸವನ್ನು ಬೆಳಸಬೇಕು. ರಾಜ್ಯ ಸರಕಾರವು ಶಿಕ್ಷಣಕ್ಕೆ ಮತ್ತು ಕ್ರೀಡೆಗೆ ಹೆಚ್ಚಿನ ಸೌಲಭ್ಯವನ್ನು ಕೊಡುತ್ತಿದ್ದು ಇದರ ಸರಿಯಾದ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯ ಕ್ರೀಡಾ ಪಟುಗಳನ್ನಾಗಿ ಮಾಡಿ ಜಿಲ್ಲೆಗೆ ಕಿರ್ತಿ ತರುವಂತೆ ಮಾಡುವುದು. ಪ್ರತಿಯೊಬ್ಬ ಶಿಕ್ಷಕರ ಆದ್ಯ

ಕರ್ತವ್ಯವಾಗಿದೆ. ಎಂದು ಹೇಳಿದರು.

ಶಾಲಾ ಕೊಠಡಿ ಕಾಮಗಾರಿಗೆ ಶಾಸಕರಿಂದ ಚಾಲನೆ  ಕೊಪ್ಪಳ : ದಿ.೧೯ ಭಾಗ್ಯನಗರ ಗ್ರಾಮದ ಪ್ರೌಢಶಾಲೆಯಲ್ಲಿ ೮ ನೂತನ ಕೊಠಡಿಗಳ ಕಾಮಗಾರಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಅನುಧಾನಗಳ ಯೋಜನೆಯಡಿಯಲ್ಲಿ ೪೨ ಲಕ್ಷದ ಕಾಮಗಾರಿಗೆ  ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಭೂಮಿ ಪೂಜೆಯನ್ನು ನೆರವೇರಿಸಿದರು.   

ಈ ಸಂದರ್ಭದಲ್ಲಿ ಶ್ರೀಮತಿ ವನೀತಾ ಗಡಾದ, ಹೊನ್ನೂರುಸಾಬ, ಹುಲಿಗೆಮ್ಮ, ಪ್ರಸನ್ನ ಗಡಾದ, ಅಮ್ಜದ ಪಟೇಲ, ಅನಿಕೇತ ಅಗಡಿ, ಗಾಳೆಪ್ಪ ಪೂಜಾರ, ಶ್ರೀನಿವಾಸ ಗುಪ್ತಾ, ಚನ್ನಪ್ಪ, ಗುರುರಾಜ ಹಲಗೇರಿ ಮಾನ್ವಿ ಪಾಷಾ, ರಾಮಣ್ಣ ಹದ್ದಿನ, ಅಭಿಯಂತರಾರದ ಡಿ.ಅರವೀಂದ , ಹಾಜಿ ಹುಸೇನಿ ಡಾ. ಉಪೇಂದ್ರ, ವಿರುಪಾಕ್ಷಪ್ಪ ಮೋರನಾಳ, ಭಾಗ್ಯನಗರ ಗ್ರಾ.ಪಂ ಸದಸ್ಯರು ಹಾಗೂ ಎಸ್.ಡಿ.ಎಂ ಸಿ ಅಧ್ಯಕ್ಷರು  ಸದಸ್ಯರು ಉಪಸ್ಥಿತರಿದ್ದರು. 



Advertisement

0 comments:

Post a Comment

 
Top