ಕೊಪ್ಪಳ :- ೧೭/೦೮/೨೦೧೩ ರಿಂದ ೧೮/೦೮/೨೦೧೩ ರ ವರೆಗೆ ಬಳ್ಳಾರಿಯ ಅಂಬಾಬವಾನಿ ಸಂಭಾಗಣದಲ್ಲಿ ಗೊಜು ರ್ಯೂ ಕರಾಟೆ ಅಸೋಸಿಯಷನ ಆಫ್ ಕರ್ನಾಟಕ ರವರು ನಡೆಸಿದ ದಕ್ಷಿಣ ಭಾರತ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ನ್ಯೂಸ್ಟಾರ್ ಕರಾಟೆ ಕ್ಲಬ್ನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ೩ ಪ್ರಥಮ ಸ್ಥಾನ ೨ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕತಾ (ಯುದ್ದನೃತ್ಯ) ಕಿರಿಯರ ವಿಭಾಗದಲ್ಲಿ ರುಕ್ಮುಣಿ.ಡಿ.ಬಂಗಾಳಿಗಿಡ ಪ್ರಥಮ ಸಥಾನ ಪಡೆದಿದ್ದಾಳೆ ಅದೇ ರೀತಿ ಕುಮಿತೆ ( ಪೈಟ ) ೪೧ ರಿಂದ ೪೬ ಕೆಜಿ ಕಿರಿಯ ವಿಭಾಗದಲ್ಲಿ ಸೈಯದ್ ಆಫ್ರಿನ್ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಕುಮಿತೆಯ (ಪೈಟ್) ೫೬-೬೧ ಕೆಜಿ ಹಿರಿಯ ವಿಭಾಗದಲ್ಲಿ ಮುತ್ತುರಾಜ ಬಂಡಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಅದೇ ರೀತಿಯಾಗಿ ರಾಮು ಭಜಂತ್ರಿ ಮತ್ತು ಹನುಮಂತ.ಡಿ ಕುಮಿತೆಯ (ಪೈಟ್) ೪೧ ರಿಂದ ೪೬ ಕೆ ಜಿ ಮತ್ತು ೪೭-೫೨ ಕೆ ಜಿ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾಳೆ. ರಮೆಶ.ಡಿ, ಚಂದ್ರುಶೇಖರ, ಸುನೀಲ ಮರಾಠಿ, ಸ್ಪರ್ಧೆಯಲ್ಲಿ ಭಾಗವಹಿಸಿ ಸಮಾಧನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಈ ಕರಾಟೆ ಪಟುಗಳಿಗೆ ಶ್ರೀಕಾಂತ.ಪಿ.ಕಲಾಲ ತರಬೇತಿಯನ್ನು ನೀಡಿದ್ದರು. ಇವರೊಂದಿಗೆ ಅಂತರಾಷ್ಟ್ರೀಯ ಕರಾಟೆ ಪಟು ಹಾಗೂ ಹಿರಿಯ ತರಬೇತಿದಾರ ಮೌನೇಶ.ಎಸ್.ವಡ್ಡಟಿ ಹಾಗೂ ತರಬೇತಿದಾರರಾದ ಚಿರಂಜಿವಿ.ಎಮ್..ಗಿಣಗೇರಾ, ಶಾಂತವೀರಯ್ಯ ನರೆಗಲ್ಮಠ, ಶಂಕರ.ಎ.ವಡ್ಡಟ್ಟಿ, ಸೈಯದ್ ಹೂಗಾರ, ಜೋತೆಗೆ ಕ್ರೀಡೆಆಪಟುಗಳಾದ ಪೋಷಕರಾದ ಸೈಯದ್ ಇಮ್ತಿಯಾಜ್,ಪೈಯಾಜ್ ಪಾಷಾ ಎಮ್ ಯತ್ನಟ್ಟಿ ಅಭಿನಂದಿಸಿದರು.
0 comments:
Post a Comment