PLEASE LOGIN TO KANNADANET.COM FOR REGULAR NEWS-UPDATES


ನಿನ್ನೆಯಿಂದ ಮುಂದುವರೆದದ್ದು....

ಯಡಿಯೂರಪ್ಪ ಕೂಡಾ ಸ್ಪರ್ಧಿಸುವ ಸಾಧ್ಯತೆ :
         ಬಿಎಸ್ಸಾರ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ನ ನಾಯಕರ ಈ ನಿರ್ಧಾರದಿಂದ ಮೊದಲು ಒಳಗೊಳಗೆ ನಕ್ಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಈಗ ಎಚ್ಚೆತ್ತುಕೊಂಡಿದ್ದಾರೆ. ಹಲವು ಗುಡಿ-ಗುಂಡಾರಗಳಿಗೆ ಸುತ್ತಾಡುವ ಯಡಿಯೂರಪ್ಪನವರಿಗೆ ಸಿಎಂ ಆಗುವ ಯೋಗದ ಭವಿಷ್ಯ ಕಿವಿಗೆ ಬಿದ್ದಿದೆ. ಅದಕ್ಕಾಗಿ ಯಡಿಯೂರಪ್ಪನವರು ಸಹ ತಮ್ಮ ತವರು ಜಿಲ್ಲೆ ಬಿಟ್ಟು ಈ ಬಾರಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧೆಗಿಳಿಯಲು ವೇದಿಕೆ ಸಜ್ಜುಗೊಳಿಸಿದ್ದಾರೆ.
         ಜೆಡಿಎಸ್‌ನ ಇಕ್ಬಾಲ್ ಅನ್ಸಾರಿಗೆ ಯಡಿಯೂರಪ್ಪನವರು ಗಂಗಾವತಿಯಲ್ಲಿ  ಸ್ಪರ್ಧಿಸುವುದು  ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗಾಗಲೇ ಗಂಗಾವತಿ ನಗರಸಭೆಯನ್ನು ಜೆಡಿಎಸ್ ಮಡಿಲಿಗೆ ಹಾಕುವ ಮೂಲಕ ಕ್ಷೇತ್ರದಲ್ಲಿ ಅನ್ಸಾರಿ ಅಲೆ ಸೃಷ್ಟಿಸಿದ್ದ ಇಕ್ಬಾಲ್ ಅವರು ಯಡಿಯೂರಪ್ಪನವರ ವಿರುದ್ಧ ಸ್ಪರ್ಧಿಸಿ ಗೆಲ್ಲಬೇಕಿದೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಈವರೆಗೂ ಸೋತಿದ್ದ ಅನ್ಸಾರಿ ಗಂಗಾವತಿ ನಗರಸಭೆಯನ್ನು ವಶಪಡಿಸಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದರು. ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಿ ಗೆಲ್ಲುವುದು ಸುಲಭದ ಮಾತಲ್ಲ. ಆದರೂ ಇಕ್ಬಾಲ್ ಅನ್ಸಾರಿ ಇದನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗೆ ಬೇಕಾದ ಎಲ್ಲ ತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ. 
          ಒಂದು ವೇಳೆ ಇಕ್ಬಾಲ್ ಅನ್ಸಾರಿ, ಯಡಿಯೂರಪ್ಪ  ಅವರನ್ನು ಸೋಲಿಸಿದರೆ ಈಗಾಗಲೇ ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ವೈರಿಯನ್ನು ಸೋಲಿಸಿದ ಕಾರಣಕ್ಕಾಗಿ ಅನ್ಸಾರಿಯವರನ್ನೇ ಮುಖ್ಯಮಂತ್ರಿ ಪಟ್ಟಕ್ಕೇರಿಸಲು ಸಜ್ಜಾಗಿದ್ದಾರೆ. ಸರಕಾರ ರಚನೆಯ ಸಂದರ್ಭದಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುವ ಸಂದರ್ಭ ಬಂದರೆ ಅಧಿಕಾರ ಹಂಚಿಕೆ ಆಧಾರದಲ್ಲಿ ಅನ್ಸಾರಿಯವರನ್ನು ಸಿಎಂ ಮಾಡುವುದಾಗಿ ಕುಮಾರಸ್ವಾಮಿ ಆಪ್ತರೆದುರು ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಆನ್ಸಾರಿಯವರನ್ನು ಸಿಎಂ ಮಾಡಿದರೆ ಅಪ್ಪ-ಮಕ್ಕಳ ಪಕ್ಷ ಅಧಿಕಾರಕ್ಕಾಗಿ ಏನನ್ನಾದರೂ ಮಾಡುತ್ತದೆ ಎಂಬ ಆರೋಪಕ್ಕೆ ಮುಕ್ತಿ ಸಿಗುತ್ತದೆ. ಜೆಡಿಎಸ್‌ನವರು ಸ್ವಾರ್ಥಿಗಳು ಎನ್ನುವ ಮಾತಿಗೆ ಕಡಿವಾಣ ಬೀಳುತ್ತದೆ ಎಂಬ ಲೆಕ್ಕಾಚಾರ ಜೆಡಿಎಸ್ ಪಕ್ಷದ್ದು.

ಅಚ್ಚರಿ ಏನಲ್ಲ  :
          ಸದ್ಯ ಕೊಪ್ಪಳ ಜಿಲ್ಲೆಯ ಈ ರಾಜಕೀಯ ಬೆಳವಣಿಗೆಗಳು ಅಚ್ಚರಿ ಏನಲ್ಲ. ಆದರೂ ಎಲ್ಲವೂ ಸತ್ಯವೆಂದು ಹೇಳಲೂ ಆಗದು. ಏಕೆಂದರೆ ಈ ಎಲ್ಲ ಬೆಳವಣಿಗೆಗಳು ನಡೆದಿರುವುದು ಏಪ್ರಿಲ್ ೧ರ ಮೂರ್ಖರ ದಿನದ ವಿಶೇಷಕ್ಕಾಗಿ.

Advertisement

0 comments:

Post a Comment

 
Top