PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನಗರದ ಸರ್ವೆ ನಂ.೪೩೮ ರ ೫ ಎಕರೆ ೦೬ ಗುಂಟೆ ಜಾಗೆಯಲ್ಲಿ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಐ.ಹೆಚ್.ಎಸ್.ಡಿ.ಪಿ. ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಿತಿ ಕೇಂದ್ರದವರು ನಿರ್ಮಿಸಲಾಗಿರುವ ೧೦೪ ಮನೆಗಳನ್ನು ಈ ಕೆಳಗಿನ ನಿಬಂಧನೆಗಳಂತೆ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ನಗರದ ಸರ್ವೆ ನಂ. ೪೩೮ ರಲ್ಲಿ ನಿರ್ಮಿಸಲಾಗಿರುವ ೨೫ ಚ.ಮೀ. ವಿಸ್ತೀರ್ಣ ಹೊಂದಿರುವ ೧೦೪ ಮನೆಗಳನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.  ಆರ್ಥಿಕವಾಗಿ ಹಿಂದುಳಿದವರು (ಇWS/ಃPಐ) ಅರ್ಜಿಗಳನ್ನು ಸಲ್ಲಿಸಲು ಅರ್ಹರಿರುತ್ತಾರೆ. ವಾರ್ಷಿಕ ಆದಾಯ ರೂ.೩೨,೦೦೦ ಮೀರಿರಬಾರದು.  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದೊಂದಿಗೆ ಆದಾಯದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.  ಮನೆಯನ್ನು ಪಡೆದವರು ಮನೆಯನ್ನು ಬೇರೆ ಯಾರಿಗೂ ಒಳಬಾಡಿಗೆ ಕೊಡತಕ್ಕದ್ದಲ್ಲ, ಮಾರತಕ್ಕದ್ದಲ್ಲ, ಅಡವು ಹಾಕತಕ್ಕದ್ದಲ್ಲ ಅಥವಾ ಅದರಲ್ಲಿಯ ತಮ್ಮ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸತಕ್ಕದ್ದಲ್ಲ ಹಾಗೂ ಮನೆಯ ನವೀಕರಣ ಬಯಸಿದ್ದಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯಬಹುದಾಗಿದೆ,  ಅರ್ಜಿದಾರರ ಕುಟುಂಬದ ವಿವರವನ್ನು ಈ ಕೆಳಗಿನಂತೆ ನೀಡುವುದು. ಗಂಡ, ಹೆಂಡತಿ, ೨೫ ವರ್ಷದವರೆಗಿನ ಮದುವೆಯಾದ, ಮದುವೆಯಾಗದಿರುವ ಮಕ್ಕಳು ಇದ್ದಲ್ಲಿ ವಿವರ ನೀಡುವುದು, ೬೦ ವರ್ಷಗಳಿಗಿಂತ ಮೇಲ್ಪಟ್ಟ ವಯೋವೃದ್ಧ ಪುರುಷರು, ಮಹಿಳೆಯರು, ೧೮ ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ ವಿಧವೆಯರು ಹಾಗೂ ಮರುಮದುವೆ ಮಾಡಿಕೊಳ್ಳದಿದ್ದವರನ್ನು ಹೊರತುಪಡಿಸಿ ಸಂಸಾರಸ್ಥರಲ್ಲದವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದಿಲ್ಲ, ಅರ್ಜಿದಾರರ ಹೆಸರಲ್ಲಾಗಲೀ ಅವರ ಕುಟುಂಬದ ಸದಸ್ಯರ, ನೆಂಟರ ಹೆಸರಿನಲ್ಲಿ ಮನೆ ಅಥವಾ ನಿವೇಶನಗಳನ್ನು ಸರ್ಕಾರದ ವತಿಯಿಂದ, ಸ್ವಂತವಾಗಿ ಹೊಂದಿದ್ದಲ್ಲಿ ವಿವರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಮೇಲೆ ನಮೂದಿಸಿದ ಷರತ್ತುಗಳ ಪೈಕಿ ಯಾವುದೇ ಷರತ್ತನ್ನು ಉಲ್ಲಂಘಿಸಿದಲ್ಲಿ ಮನೆ ಹಂಚಿಕೆಯನ್ನು ಯಾವುದೇ ಪರಿಹಾರ ಕೊಡದೆಯೇ ರದ್ದುಗೊಳಿಸುವ ಹಾಗೂ ಮನೆಯನ್ನು ಪುನಃ ವಶಕ್ಕೆ ಪಡೆಯುವ ಹಕ್ಕನ್ನು ಮಂಡಳಿ ಕಾಯ್ದಿರಿಸಿದೆ, ಮನೆಯ ಹಂಚಿಕೆ ಮಾಡಿದ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಕಾರ್ಡ್‌ಗಳನ್ನು ವಿತರಿಸಿ ಒಂದು ವರ್ಷದ ನಂತರ ನಿಯಮಾನುಸಾರ ನೊಂದಣಿ ಮಾಡಿಕೊಳ್ಳಲಾಗುವುದು, ಸದರಿ ಮನೆಗಳನ್ನು ವಾಸಕ್ಕಾಗಿ ಮಾತ್ರ ಉಪಯೋಗಿಸತಕ್ಕದ್ದು, ವಾಣಿಜ್ಯ ಬಳಕೆಗೆ ಉಪಯೋಗಿಸತಕ್ಕದ್ದಲ್ಲಾ, ಫಲಾನುಭವಿಗಳು ಕೊಪ್ಪಳ ನಗರದ ನಿವಾಸಿಗಳಾಗಿರತಕ್ಕದ್ದು (ರಹವಾಸಿ ಪ್ರಮಾಣ ಪತ್ರ ಲಗತ್ತಿಸುವುದು), ಅರ್ಜಿ ಶುಲ್ಕ ಪ.ಜಾತಿ, ಪ.ಪಂಗಡದವರಿಗೆ ರೂ. ೫೦ ಹಾಗೂ ಇತರರಿಗೆ ರೂ. ೧೦೦ ನಿಗದಿಪಡಿಸಲಾಗಿದ್ದು,  ಅರ್ಜಿ ಶುಲ್ಕವನ್ನು ಪೋಸ್ಟಲ್ ಆರ್ಡರ್ ಮೂಲಕ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಉಪವಿಭಾಗ, ಗದಗ ಇವರ ಹೆಸರಿನಲ್ಲಿ ಪಡೆದು, ನಿಗದಿತ ಅರ್ಜಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ. ೧೮ ರವರೆಗೆ ಪಡೆಯಬಹುದಾಗಿದೆ.  ಭರ್ತಿ ಮಾಡಿದ ಅರ್ಜಿಗಳನ್ನು ಡಿ. ೧೯ ರಿಂದ ಜ. ೦೩ ರವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಲಾಗುವುದು.  ಭರ್ತಿ ಮಾಡಿದ ಅರ್ಜಿಯೊಂದಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ರೂ.೧೩,೫೦೦/- ಹಾಗೂ ಇನ್ನುಳಿದ ವರ್ಗದವರು ರೂ.೧೬,೨೦೦/- ಗಳ ಮೊತ್ತದ ರಾಷ್ಟ್ರೀಕೃತ ಬ್ಯಾಂಕಿನ ಡಿ.ಡಿ.ಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ, ಗದಗ ಉಪ-ವಿಭಾಗ ಗದಗ (ಂssisಣಚಿಟಿಣ ಇxeಛಿuಣive ಇಟಿgiಟಿeeಡಿ, ಏSಆಃ, Sub-ಆivisioಟಿ, ಉಚಿಜಚಿg) ಇವರ ಹೆಸರಿನಲ್ಲಿ ಅರ್ಜಿಯೊಂದಿಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸತಕ್ಕದ್ದು.   ಹಂಚಿಕೆ ಮಾಡಲು ಬಾಕಿ ಇರುವ ೧೦೪ ಮನೆಗಳ ಪೈಕಿ ಹೆಚ್ಚು ಅರ್ಜಿ ಬಂದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು, ಹಂಚಿಕೆ ಆಗದ ಅರ್ಜಿದಾರರ ಡಿ.ಡಿ. ಗಳನ್ನು ಯಾವುದೇ ಬಡ್ಡಿ ಇಲ್ಲದೇ ಹಿಂದಿರುಗಿಸಲಾಗುವುದು, ಯಾವುದೇ ಅರ್ಜಿದಾರರು ಸರಿಯಾದ ಮಾಹಿತಿಯನ್ನು ಒದಗಿಸದಿದ್ದಲ್ಲಿ ಅರ್ಜಿಯನ್ನು

Advertisement

0 comments:

Post a Comment

 
Top