PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ. ೨೮. ಜೆಡಿಎಸ್ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಬೆಟಗೇರಿ ಗ್ರಾಮದಲ್ಲಿ ಅಳವಂಡಿ ಜಿಲ್ಲಾ ಪಂಚಾಯತ ಅಭ್ಯರ್ಥಿ ನಾಗನಗೌಡ ಮಾಲಿಪಾಟೀಲ್ ಪರ ಪ್ರಚಾರ ಮಾಡಲಾತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ ಗೊಂಡಬಾಳ, ಜೆಡಿ (ಎಸ್) ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾ" ಹಾಗೂ ಶಾಸಕ ಸಂಗಣ್ಣ ಕರಡಿಯವರ ಸಾಧನೆಗಳು ಜೆಡಿಎಸ್ ಗೆ ಶಕ್ತಿಯಾಗಿದ್ದು, ಭ್ರಷ್ಟಾಚಾರದಲ್ಲಿ ಮುಂದಿರುವ ಬಿಜೆಪಿ ಮತ್ತು ನೈತಿಕತೆ ಮರೆತಿರುವ ಕಾಂಗ್ರೆಸ್ ಂದ ನಾಡಿನ ಪ್ರಗತಿ ಅಸಾಧ್ಯ, ೧೦ವರ್ಷ ಅಳವಂಡಿಯನ್ನು ಆಳಿದ ಕಾಂಗ್ರೆಸ್ ಸಣ್ಣ ಅಭಿವೃದ್ಧಿಯನ್ನು ಸಹ ಮಾಡಿಲ್ಲ, ಜನರ ಕಷ್ಟಗಳಿಗೂ ಸ್ಪಂದಿಸಿಲ್ಲವಾದ್ದರಿಂದ ಈ ಬಾರಿ ಜೆಡಿಎಸ್ ನ ಅಭ್ಯರ್ಥಿಗಳ ಗೆಲವು ಖಚಿತ ಎಂದರು.
ಬೆಟಗೇರಿ ತಾ. ಪಂ. ಅಭ್ಯರ್ಥಿ ಅಡಿವೆಪ್ಪ ರಾಟಿ ಮತ್ತೂರ ತಾ. ಪಂ. ಅಭ್ಯರ್ಥಿ ಸಂಗಪ್ಪ ತಿಗರಿ ಪರ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಕೊಟ್ರಯ್ಯ ಬನ್ನಿಮಠ, ಶಂಕ್ರಪ್ಪ ನಾಗರಡ್ಡಿ, ಪಿಎಲ್‌ಡಿ ಬ್ಯಾಂಕ್ ನಿದೇರ್ಶಕ "ರೇಶ ಲಕ್ಷಾಣಿ, ನಾರಾಯಣಪ್ಪ ಚಿಂಚಲಿ, ಪ್ರಾಣೇಶ ಪೂಜಾರ, ಶಿವಯ್ಯ ಮೈನಳ್ಳಿ, ಕೊಟ್ರಪ್ಪ ಮೇಟಿ, ಗ"ಸಿದ್ದಪ್ಪ ಜವಳಿ, ಕೆಂಚಪ್ಪ ತಳವಾರ, "ರುಪಾಕ್ಷಪ್ಪ ಬಿನ್ನಾಳ, ಶಿವಣ್ಣ ಮೇಟಿ, ಅಯ್ಯಪ್ಪ ಜವಳಿ, ಹನುಮಪ್ಪ ಘಟ್ಟಿರಡ್ಡಿಹಾಳ, ಗ"ಸಿದ್ದಪ್ಪ ಮಾಳೆಕೊಪ್ಪ, ಬಸಪ್ಪ ಹಾವಕ್ಕನವರ, ಸೋಮಪ್ಪ ಮತ್ತೂರ ಇತರರು ಇದ್ದರು.

Advertisement

0 comments:

Post a Comment

 
Top