PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಸಮಕಾಲೀನ ಸಮಾಜದ ವಿಕಾರಗಳ ನಡುವೆ ಸೃಜನಶೀಲ ಮನಸ್ಸುಗಳು ಒಂದುಗೂಡಿರುವುದು ಬಹುಮುಖ್ಯ. ಇದು ಆರೋಗ್ಯಪೂರ್ಣ ಬೆಳವಣಿಗೆ, ಸಾಮಾಜಿಕ ಬೆಳವಣಿಗೆಗೆ ಆಶಾದಾಯಕವಾದುದು ಎಂದು ಯುವಕವಿ ಪ್ರಮೋದ ತುರ್ವಿಹಾಳ ಹೇಳಿದರು ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕವಿಗಳು ಮನುಷ್ಯ ಪ್ರೀತಿಯ ಜೊತೆಗೆ ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು,ಅಧ್ಯಯನದ ಶಿಸ್ತನ್ನು ರೂಡಿಸಿಕೊಳ್ಳಬೇಕು ಇದರಿಂದ ಹೊಸ ಶೈಲಿಯನ್ನು ರೂಡಿಸಿಕೊಳ್ಳಲು ಸಾಧ್ಯ. ಓದುಗರು ಕುತೂಹಲದಿಂದ ಕಾಯುವಂತಹ ರಚನೆ ಕವಿಗಳಿಂದ ಬರಬೇಕು ಎಂದರು. ಸಮಾಜ ಮತ್ತು ಲೇಖಕನ ನಡುವೆ ಅನುಸಂದಾನವೆರ್ಪಟ್ಟು ಒಳ್ಳೆಯ ವಿಚಾರಗಳು ಎಲ್ಲೆಡೆ ಹರಡಬೇಕು ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕವಿಸಮಯದಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ಕವನಗಳ ಮಟ್ಟ ಏನೇ ಇರಲಿ ಬರೆಯಬೇಕು ಎನ್ನುವ ಕುತೂಹಲದ ಮನಸ್ಥಿತಿ ಇಟ್ಟುಕೊಂಡು ಬರೆಯುತ್ತಿರುವ ಕವಿಗಳಿಗೆ ಅಭಿನಂದನೆಗಳು ಎಂದರು.

ಈ ಸಲದ ಕವಿಸಮಯ ಮುಕ್ತ ಕವನಗಳದಾಗಿತ್ತು. ಲಕ್ಷ್ಮೀ ಓತಗೇರಿ -ಹೆಣ್ಣು, ಅಲಿನವಾಜ್-ರಾಜಕೀಯ, ಕರೆಂಟ್, ಪುಷ್ಪಲತಾ ಏಳುಬಾವಿ -ಚುಟುಕು, ಕೋಳೂರು ರಂಗನಾಥ-ಟಾಲ್‌ಸ್ಟಾಯ್ , ಪ್ರಮೋದ ತುರ್ವಿಹಾಳ- ಮಗುವಿಗೊಂದು,ಮಾನಪ್ಪ ಬೆಲ್ಲದ-ನೊಂದಮನ ಕೈಚಾಚಿದಾಗ, ಮಹೇಶ್ ಬಳ್ಳಾರಿ-ಕ್ಯಾಸ್ ಬ್ಲಾಂಕ್,ಜಡೆಯಪ್ಪ - ದಲಿತರು,ಶಿವಪ್ರಸಾದ ಹಾದಿಮನಿ-ಭಾವೈಕ್ಯತೆ,ವೀರಣ್ಣ ಹುರಕಡ್ಲಿ- ಮಾತು, ವಿಠ್ಠಪ್ಪ ಗೋರಂಟ್ಲಿ- ಕವನ, ಜಿ.ಎಸ್.ಬಾರಕೇರ- ತುಂಗಭದ್ರೆ,ಸಿರಾಜ್ ಬಿಸರಳ್ಳಿ- ದ್ವೇಷ ಕವನಗಳನ್ನು ವಾಚನ ಮಾಡಿದರು. ವೀರಕನ್ನಡಿಗ ಸಂಘದ ಶಿವಾನಂದ ಹೊದ್ಲೂರ, ಪತ್ರಕರ್ತ ಮಹೇಶ ಬಾಬು ಉಪಸ್ಥಿತರಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top