PLEASE LOGIN TO KANNADANET.COM FOR REGULAR NEWS-UPDATES

 ನಗರದ ನೌಕರರ ಭವನದಲ್ಲಿ ಇತ್ತೀಚಿಗೆ ಪರಿಷಿಷ್ಠ ಜಾತಿ ಹಾಗೂ ಪರಿಷಿಷ್ಠ ಪಂಗಡಗಳ ಸರ್ಕಾರಿ ನೌಕರರ ಸಂಘದ ವತಿಯಿಂದ ಅಂಬೇಡ್ಕರ ಜಯಂತಿ ಆಚರಿಸಲಾಯಿತು. ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿ ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅಂಬೇಡ್ಕರ್ ಅವರು ಶ್ರಮಿಸಿದ್ದಾರೆ. ಅವರ ಬದುಕು ಹಾಗೂ ಹೋರಾಟ ಇತರರಿಗೆ ಮಾದರಿಯಾಗಬೇಕು. ಸಂವಿಧಾನ ರಚನೆಯಲ್ಲಿ ಅವರು ವಹಿಸಿರುವ ಪಾತ್ರದಿಂದಲೇ ಇಂದಿಗೂ ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ ಎಂದರು.  ಈ ಸಂದರ್ಭದಲ್ಲಿ  ಕೊಪ್ಪಳ ಜಿಲ್ಲಾ ಪರಿಷಿಷ್ಠ ಜಾತಿ ಹಾಗೂ ಪರಿಷಿಷ್ಠ ಪಂಗಡಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೀರಣ್ಣ, ಕರ್ನಾಟಕ ರಾಜ್ಯ ಪರಿಸಿಷ್ಠ ಜಾತಿ ಹಾಗೂ ಪರಿಸಿಷ್ಠ ಪಂಗಡಗಳ ಸರ್ಕಾರಿ ನೌಕರರ ಸಂಘದ ಸಹ ಕಾರ್ಯದರ್ಶಿ ಡಾ.ಗವಿಸಿದ್ಧಪ್ಪ ಮುತ್ತಾಳ,  ಪ್ರಭುರಾಜ ನಾಯಕ್, ಸಿ.ವಿ. ಚವ್ಹಾಣ,  ಹನುಮಂತಪ್ಪ ಸಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top