PLEASE LOGIN TO KANNADANET.COM FOR REGULAR NEWS-UPDATES

 ಗುರು ಪ್ರಕಾಶನ ಕೊಪ್ಪಳ ಹಾಗೂ ಕವಿಸಮಯ ಬಳಗದ ಸಹಕಾರದೊಂದಿಗೆ  ಅನಸೂಯಾ ಜಹಗೀರದಾರವರ  "ಒಡಲಬೆಂಕಿ" ಕವನ ಸಂಕಲನದ ಬಿಡುಗಡೆ ಕಾರ‍್ಯಕ್ರಮ ನಾಳೆ ದಿ. ೨೪-೬-೨೦೧೪ ಮಂಗಳವಾರದಂದು ಸಂಜೆ ೬-೦೦ ಗಂಟೆಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಕಲ್ಯಾಣ ಮಂಟಪ ಸ್ಟೇಷನ್ ರಸ್ತೆ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಕಲನ ಬಿಡುಗಡೆಯನ್ನು ಡಾ.ವಿಶ್ವನಾಥ ವಂಶಾಂಕೃತಮಠ  ಪ್ರಾಧ್ಯಾಪಕರು ಎಸ್.ಆರ್.ಕಂಠಿ ಶಿಕ್ಷಣ ಮಹಾವಿದ್ಯಾಲಯ ಇಲಕಲ್, ಕೃತಿ ಕುರಿತು ಡಾ.ಜಾಜಿ ದೇವೇಂದ್ರಪ್ಪ ಪ್ರಾಧ್ಯಾಪಕರು ಸ.ಪ್ರ.ದ.ಪ.ಕಾಲೇಜು ಗಂಗಾವತಿ ಮಾತನಾಡಲಿದ್ದಾರೆ.ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಎಸ್.ಪಾಟೀಲ್ ಹಿರಿಯ ಸಾಹಿತಿಗಳು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಠ್ಠಪ್ಪ ಗೋರಂಟ್ಲಿ ಹಿರಿಯ ಸಾಹಿತಿಗಳು,ಪತ್ರಕರ್ತರು, ಡಾ.ಆರ್.ಕೆ.ಕುಲಕರ್ಣಿ ಎಸ್.ಆರ್.ಕಂಠಿ ಶಿಕ್ಷಣ ಮಹಾವಿದ್ಯಾಲಯ ಇಲಕಲ್, ಆಗಮಿಸಲಿದ್ದಾರೆ.ಉಪಸ್ಥಿತಿ : ಅಲ್ಲಮಪ್ರಭು ಬೆಟ್ಟದೂರ,ಡಾ.ವಿ.ಬಿ.ರಡ್ಡೇರ್, ಮಹಾಂತೇಶ ಮಲ್ಲನಗೌಡರ, ವೀರಣ್ಣ ನಿಂಗೋಜಿ, ಸೋಮರಡ್ಡಿ ಅಳವಂಡಿ, ಜಗನ್ನಾಥ ಹುನಗುಂದ ಆಗಮಿಸಿಲಿದ್ದಾರೆ.
ಸಕಲ ಸಾಹಿತ್ಯಾಸಕ್ತರು ಹಾಗೂ ಸಹೃದಯರು ಕಾರ‍್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಪ್ರಕಾಶಕರಾದ ಕೃಷ್ಣಶಾಸ್ತ್ರಿ ಅಳವಂಡಿ  ಕೋರಿದ್ದಾರೆ.

Advertisement

0 comments:

Post a Comment

 
Top