PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಕೊಪ್ಪಳ ಜಿಲ್ಲಾ ಕಾಂಗ್ರೇಸ  ಕಾರ್ಯಲಯದಲ್ಲಿ ಶ್ರೀಮತಿ ಇಂದಿರಾಗಾಂದಿಯವರ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು  ಶ್ರೀಮತಿ ಇಂದಿರಾಗಾಂದಿಯವರು ರಾಷ್ಟ್ರಕಂಡ ದಿಮಂತ ನಾಯಕಿ ಇವರು ೨೦ ಅಂಶದ ಕಾರ್ಯಕ್ರಮಗಳು, ಬ್ಯಾಂಕಗಳನ್ನು ರಾಷ್ಟ್ರಿಕರಣ ಮಾಡಿದ ಹೆಮ್ಮೆ ಇವರಿಗೆ ಸಲ್ಲುತ್ತದೆ ಭಾರತದಲ್ಲಿ ಗರಿಭಿ-ಹಠಾವೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಇವರ ಮುತ್ಸದಿ ರಾಜಕಾರಣದ  ಚಿಹ್ನೆ ಯಾಗಿದೆ  ಭಾರತವನ್ನು ವಿಶ್ವದಲ್ಲಿಯೆ ಪ್ರಭಲ ಆರ್ಥಿಕವಾಗಿ ಮುಂದುವರೆದ ರಾಷ್ಟ್ರವನ್ನು ಮಾಡಿದ ಹೆಗ್ಗಳಿಕೆಗೆ ಮಾಜಿ ಪ್ರಧಾನಿ ಇಂದಿರಾಗಾಂದಿಗೆ ಸಲ್ಲುತ್ತದೆ ಎಂದು ಇವರ ವ್ಯಕ್ತಿತ್ವವನ್ನು ಕೊಂಡಾಡಿದರು ಈ ಸಂದರ್ಭದಲ್ಲಿ  ಎಸ್.ಬಿ.ನಾಗರಳ್ಳಿ, ಮರ್ಥಾನಲ್ಲಿ ಅಡೆವಾಲೆ, ಜುಲ್ಲುಖಾದರಿ,ಇಂದಿರಾ ಭಾವಿಕಟ್ಟಿ, ಗವಿಸಿದ್ದಪ್ಪ ಮುದಗಲ್, ಶಿವಾನಂದ ಹೊದ್ಲೂರು, ಮುನಿರ ಸಿದ್ದಕ್ಕಿ, ಸುರೇಶ ರಡ್ಡಿ,ಜುಬೆರಿ ಹುಸೇನಿ, ಅಕ್ಬರ ಪಾಷಾ ಪಲ್ಟನ ,ಇನ್ನು ಅನೇಕ ಕಾರ್ಯಕರ್ತರು  ಪುಣ್ಯತಿಥಿ ಆಚರಣೆಯಲ್ಲಿ ಪಾಲಗೊಂಡಿದ್ದರು  

Advertisement

0 comments:

Post a Comment

 
Top