ಟಿಎಪಿಸಿಎಂಎಸ್ಗೆ ಅವಿರೋಧ ಆಯ್ಕೆ :
ಅಧ್ಯಕ್ಷರಾಗಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ಉಪಾಧ್ಯಕ್ಷರಾಗಿ ಚಂದ್ರಕಾಂತ ಮಹಾಂತಯ್ಯನಮಠ
ಕೊಪ್ಪಳ : ಕೊಪ್ಪಳ ಟಿ.ಎ.ಪಿ.ಸಿ.ಎಂ.ಎಸ್ಗೆ ಅಧ್ಯಕ್ಷರಾಗಿ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ ಉಪಾಧ್ಯಕ್ಷರಾಗಿ ಚಂದ್ರಕಾಂತ ಮಹಾಂತಯ್ಯನಮಠ ಬುಧುವಾರದಂದು ಅವಿರೋಧವಾಗಿ ಆಯ್ಕೆಗೊಂಡರು.
ನಿರ್ದೇಶಕರಾಗಿ ಮರ್ದಾನಪ್ಪ ಬಿಸರಳ್ಳಿ, ಮಲ್ಲಿಕಾರ್ಜುನಗೌಡ ಮುದ್ದಾಬಳ್ಳಿ, ಬಸವರಾಜ್ ರಾಜೂರು, ಶಂಕ್ರಪ್ಪ ಅಂಡಗಿ, ಗುದ್ನೆಪ್ಪ ಹೊಸೂರು, ಲಕ್ಷ್ಮಣ ಮುಳಗುಂದ, ಜಾಫರ್ ಹುಸೇನ್ ಹಗಲದೂಟಿ, ನಿರ್ಮಲಾ ಯಂಕರಡ್ಡಿ ದೇವರಡ್ಡಿ,ಸುವರ್ಣ ರಾಜೇಂದ್ರ ಶೆಟ್ಟರ್, ಸಂಗನಗೌಡ ಪಾಟೀಲ್, ನಾಮನಿರ್ದೇಶಕ ಶಿವಪ್ಪ ಕಲ್ಲನವರ್.
ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರ ಪ್ರಾಧಿಕಾರದ ಅಧ್ಯಕ್ಷ ಜುಲ್ಲುಖಾದರ್ ಖಾದ್ರಿ, ಕೆಎಂಎಫ್ ನಿರ್ದೇಶಕ ವೆಂಕನಗೌಡ ಹಿರೇಗೌಡ,ಎಪಿಎಂಸಿ ನಿರ್ದೇಶಕ ಹನುಮರಡ್ಡಿ ಹಂಗನಕಟ್ಟಿ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಗವಿಸಿದ್ದೇಶ ಹುಡೇಜಾಲಿ, ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರಾ, ಸದಸ್ಯ ಮುತ್ತುರಾಜ್ ಕುಷ್ಟಗಿ,ರಾಮಣ್ಣ ಕಲ್ಲನವರ್, ಕಾಂಗ್ರೆಸ್ ಮುಖಂಡರಾದ ಶಿವನಂದಾ ಹೊದ್ಲೂರು, ಯಲ್ಲಪ್ಪ ಅಬ್ಬಿಗೇರಿ, ಹನುಮಂತಪ್ಪ ಅಬ್ಬಿಗೇರಿ, ಅಕ್ಬರ್ ಪಾಷ ಪಲ್ಟನ್,ರವೀಂದ್ರ ಪಿ.ಜೆವಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.