ವಿಶ್ವಕ್ಕೆ ಅಕ್ಕಮಹಾದೇವಿಯವರ ವ್ಯಕ್ತಿತ್ವ ಪರಿಚಯಿಸಿದ್ದು ಅಲ್ಲಮ ಪ್ರಭುದೇವರು ಎಂದು ಉಪನ್ಯಾಸಕ ಶಿವಕುಮಾರ ಕುಕನೂರು ಹೇಳಿದರು. ಕೊಪ್ಪಳ ನಗರದ ಹುಡ್ಕೋ ಕಾಲೋನಿಯಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟಿನ ೬೩ನೇ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅಕ್ಕ-ಅಲ್ಲಮರ ಸಂವಾದ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಮೇಲಿನಂತೆ ಹೇಳಿದರು. ಮುಂದುವರೆದು ಮಾತನಾಡಿದ ಅವರು ಅಕ್ಕಮಹಾದೇವಿಯವರು ಮಹಾನ್ ಸಾಧಕಿಯಾಗಿದ್ದರು ವಾಹನ ಸೌಲಭ್ಯವೇ ಇಲ್ಲದ ೧೨ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಿಂದ ಬೀದರ ಜಿಲ್ಲೆಯ ಬಸವ ಕಲ್ಯಾಣದವರೆಗೂ ಒಬ್ಬಂಟಿಯಾಗಿ ಪ್ರಯಾಣ ಮಾಡಿ ಅನುಭವ ಮಂಟಪ ಸೇರಿದರು. ಅನುಭವ ಮಂಟಪಕ್ಕೆ ಬಂ
ದವರನ್ನು ಪರಿಕ್ಷಿಸಿ ಕರೆದುಕೊಳ್ಳುತ್ತಿದ್ದರು. ಹಾಗೆಯೆ ಅಕ್ಕಮಹಾದೇವಿಯವರ ಆಧ್ಯಾತ್ಮದ ಅನುಭಾವವನ್ನು ಅಲ್ಲಮ ಪ್ರಭುದೇವರು ವಿಧ ವಿಧವಾದ ಪ್ರಶ್ನೆಗಳನ್ನು ಕೇಳಿದರು. ಆಗ ಅಕ್ಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದಾಗ ಇಡಿ ಅನುಭವ ಮಂಟಪವೇ ಹರ್ಷೋದ್ಘಾರ ಮಾಡಿ ಅಕ್ಕಮಹಾದೇವಿಯವರನ್ನು ಬರಮಾಡಿಕೊಂಡರು. ಹೀಗೆ ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭುದೇವರ ಮದ್ಯೆ ನಡೆದ ಪ್ರಶ್ನೋತ್ತರವನ್ನು ಬರಹಗಾರರು ಅಕ್ಕ-ಅಲ್ಲಮರ ಸಂವಾದವೆಂದು ಕರೆದರು. ಅಕ್ಕ-ಅಲ್ಲಮರ ಸಂವಾದವು ವಚನಗಳ ರೂಪದಲ್ಲಿರುವುದು ವಿಶೇಷವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಶ್ವನಾಥ ಸಂಗಪ್ಪ ಕಪ್ಪಲಿ ಅತಿಥಿಗಳಾಗಿ ಆಗಮಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಗುರು ಬಸವೇಶ್ವರ ಟ್ರಸ್ಟಿನ ಗೌರವ ಅಧ್ಯಕ್ಷರಾದ ಪಂಪಾಪತಿ ಹೊನ್ನಳ್ಳಿ ವಹಿಸಿದ್ದರು, ದಾಸೋಹ ಸೇವೆಯನ್ನು ಶಾರದಾ ಗಣವಾರಿ ವಹಿಸಿಕೊಂಡಿದ್ದರು. ಬಸವನಗೌಡ ವಣಗೇರಿ, ರಮೇಶ ಚಟ್ನಿಹಾಳ, ನಿಂಗಪ್ಪ ಹಡಪದ, ಎಂ.ಎಸ್.ನೀಲಕಂಠಪ್ಪ, ರಮೇಶ ತುಪ್ಪದ, ಮಂಜುನಾಥ ಅಂಗಡಿ, ಸಂತೋಷ ದೇಶಪಾಂಡೆ, ಶಂಭು ಬಾವಿಹಳ್ಳಿ, ಅನಸಮ್ಮ ಮಟ್ಟಿ, ಮಹಾದೇವಿ ಜೋಳದ, ಗಿರಿಜಕ್ಕ ಬುಳ್ಳಾ, ಸುಮಂಗಲಾ ಅಕ್ಕಿ, ಜಿ.ಕೆ.ಕಡೆಮನಿ, ವೀರಣ್ಣ ಬಂಗಾರಶೆಟ್ಟರ, ಸುನೀಲ್ ಬಳ್ಳೊಳ್ಳಿ ಮತ್ತು ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಹನುಮೇಶ ಕಲ್ಮಂಗಿ ಮಾಡಿದರು, ಗವಿಸಿದ್ದಪ್ಪ ಪಲ್ಲೇದ ಸ್ವಾಗತಿಸಿದರು, ರಾಜೇಶ ಸಸಿಮಠ ವಂದಿಸಿದರು.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.