PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-19- ತಾಲೂಕಿನ ಇರಕಲಗಡಾ ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಆಯೋಜಿಸಲಾಗಿತು.
    ಈ ಕಾರ್ಯಕ್ರಮದಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ, ಬಾಲ್ಯ ವಿವಾಹವಾದ ಮಕ್ಕಳಬಗ್ಗೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಸಂಬಂದಿಸಿದ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಲಿತಾ ಸುರಳ ಮಾತನಾಡಿ, ಮಕ್ಕಳ ದೌರ್ಜನ್ಯನದ ಕುರಿತು ತಮ್ಮ ಕರ್ತವ್ಯಗಳು ಮತ್ತು ಸಮುದಾಯ ಮತ್ತು ಶಿಕ್ಷಕರ ಪಾತ್ರದ ಬಗ್ಗೆ ಮತ್ತು ಪಾಲಕ ಪ್ರತಿನಿಧಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
    ಮಗುವಿನ ಮೇಲೆ ದೌರ್ಜನ್ಯ ನಡೆದಾಗ ಸಂಬಂದಿಸಿದ ಗ್ರಾಮದ ಜನಪ್ರತಿನಿಧಿಗಳು, ಯುವಕರು, ಪಾಲಕರು ಯಾರೇ ಮಾಹಿತಿ ನೀಡಿದರು ನಾವು ಸರಿಯಾದ ಕ್ರಮ ಕೈಗೊಲ್ಳು ಸಿದ್ದರಾಗಿರುತ್ತೇವೆ ಎಂದು ತಿಳಿಸಿದರು.
ಯುನಿಸೆಫ್ ಸಂಗಟಿಕರಾದ ಮಾರುತಿ ಚಾಮಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಪ್ರಸ್ತುತ ಮಕ್ಕಳ ಮೇಲಿನ ದೌರ್ಜನ್ಯ, ಭಾಲ್ಯ ವಿವಾಹ, ಬಾಲ ಕಾರ್ಮಿಕತೆ ಕುರಿತು ಜಾಗೃತಿ ಕೈಗೊಳ್ಳಲು ಪ್ರತಿವರ್ಷ ಮಕ್ಕಳ ಹಕ್ಕುಗಳ ಗ್ರಾಮ ಸಭೆಯ iಹತ್ವವನ್ನು ಸಮುದಾಯದ ಎಲ್ಲರೂ ಅರಿತು ಮಕ್ಕಳ ಗ್ರಾಮ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿಬೇಕೆಂದು ಕರೆ ನೀಡಿದರು.
    ಕಾರ್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷೆ ಶ್ರೀಮತಿ ದ್ಯಾಮವ್ವ, ಗ್ರಾ. ಪಂ ಉಪಾಧ್ಯಕ್ಷ ಗಂಗಣ್ಣ, ಸಹಾಯಕ ಪೊಲೀಸ್ ಅಧಿಕಾರಿ ಮಹಾಂತೇಶ ಮೇಟಿ, ಕರವಸೂಲಿಗಾರ ಮಂಗಳೇಶ ಪಟ್ಟಣ ಶೆಟ್ಟಿ, ಮಕ್ಕಳ ವಿಶೇಷ ಘಟಕ ಪ್ರತಿನಿಧಿ ರವಿಕುಮಾರ, ಅಂಗನವಾಡಿ ಮೇಲ್ವಿಚಾರಕಿ ಭುವನೇಶ್ವರಿ, ಕಾರ್ಯಕರ್ತರು, ಶಾಲೆಯ ಶಿಕ್ಷಕವೃಂದ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಗ್ರಾ. ಪಂ ಸದಸ್ಯರು, ಯುವಕರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top