PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಸೆ,೧೫ ಈಗಿನ ದಿನಮಾನಗಳಲ್ಲಿ ಮದುವೆ ಮಾಡುವಕಾರ್ಯ ಮಧುಮಗಳ ತಂದೆ ತಾಯಿಗಳಿಗೆ ದೊಡ್ಡಭಾರದ ಕೆಲಸವಾಗಿದೆ ಶ್ರೀಮಂತರು ಹೇಗಾದರು ಮಾಡಿ ಹೆಚ್ಚು ಆಡಂಬರದಿಂದ ತಮ್ಮ ಮಕ್ಕಳ ಮದುವೆ ಮಾಡುತ್ತಾರೆ ಆದರೆ ಬಡವರಿಗೆ ಬಹಳ ಕಷ್ಟದ ಕೆಲವಾಗಿದೆ ಆದರೆ ಸಾಮೂಹಿಕ ವಿವಾಹಗಳಿಂದ ದುಂದುವೆ
  ಅವರು ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಏರ್ಪಡಿಸ  ಶ್ರೀಶರಣ ಬಸವೇಶ್ವರ ಜಾತ್ರೆ  ಪ್ರಯುಕ್ತ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ತಮ್ಮ ಸಯ್ಯದ್ ಫೌಂಡೇಶನ್ ಸಂಸ್ಥೆವತಿಯಿಂದ ೧೪ಜೋಡಿಗಳಿಗೆ ತಾಳಿಗಳನ್ನು ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
  ಮುಂದುವರೆದು ಮಾತನಾಡಿದ ಅವರು ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ಸಂಜೀವಿಯಾಗಿದೆ ಇಂತಹ ಕಾರ್ಯಕ್ರಮಗಳು ಹೆಚ್ಚು ಜರುಗಿಸಬೇಕು ಇದರಿಂದ ಬಡವರಿಗೆ ಹೆಚ್ಚು ಅನುಕೂಲವಗಲಿದೆ ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ ತಮ್ಮ ಫೌಂಡೇಶನ್ ವತಿಯಿಂದ ಇಂತಹ ಜನಪರ, ಬಡವರಪರ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುವುದಾಗಿ ಸಯ್ಯದ್ ಫೌಂಡೆಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.
 ಟಣಕಲ್ ಹಿರೇಮಠದ ಕಾಲಜ್ಞಾನಿಬ್ರಹ್ಮ ಜಗದ್ಗುರು ಶ್ರೀಶರಣ ಬಸವೇಶ್ವರ ಸ್ವಾಮಿಗಳು ಸೇರಿದಂತೆ ಇತರ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಅಗಳಕೇರಿ ಗ್ರಾಪಂ ಅಧ್ಯಕ್ಷ ಡಾ.ಆರ್.ಡಿ ಮುಲ್ಲಾ, ಜಿಪಂ ಸದಸ್ಯರಾದ ಟಿ.ಜನಾರ್ಧನ್ ಹುಲಗಿ, ಕೆ.ರಮೇಶ ಹಿಟ್ನಾಳ, ಮಂಜುನಾಥ ಗಂಗಾವತಿ, ವೈ,ರವೀಂದ್ರರಾವ್, ಶ್ರೀನಿವಾಸ್ ರೆಡ್ಡಿ, ನರಸೀಂಹರೆಡ್ಡಿ, ಎಪಿಎನ್ ರಾವ್, ಮರ್ದಾನಪ್ಪ ಬಿಸರಳ್ಳಿ, ಜಡಿಯಪ್ಪ ಬಂಗಾಳಿ, ಕೆ.ಜಗದೀಶ, ಕರಿಯಪ್ಪ ಮೇಟಿ, ಹನುಮಂತಪ್ಪ ಕಿಡದಾಳ, ಗವಿಸಿದ್ದಪ್ಪ ಹಿಟ್ನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಇದು ಬಡವರ ಪಾಲಿಗೆ ವರದಾನ ಕೂಡಾ ಹೌದು ಎಂದು ಸಯ್ಯದ್ ಫೌಂಡೆಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.

Advertisement

0 comments:

Post a Comment

 
Top