PLEASE LOGIN TO KANNADANET.COM FOR REGULAR NEWS-UPDATES

ನೇಪಾಳ ಮತ್ತು ಬಿಹಾರದಲ್ಲಿ ಸಂಭವಿಸಿದ ಭೂಕಂಪದಲ್ಲಿ  ಹತ್ತುಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು ಅರವತ್ತು ಸಾವರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದಲ್ಲಿ ಸಾವನಪ್ಪಿದ ಜನತೆಗೆ ಸಾಂತಾಪವನ್ನು ಸೂಚಿಸುತ್ತಾ ಗಾಯಗೋಂಡವರಿಗೆ ಗುಣಮುಖವಾಗಲೆಂದು ಎ ಐ ಡಿ ವೈ ಓ ಸಂಘಟನೆ ಹಾರೈಸುತ್ತದೆ. ಇಂದು ನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ಭೂಕಂಪದಿಂದಾಗಿ  ಸಂತ್ರಸ್ಥಗೊಂಡ ಜನತೆಗೆ ಎ ಐ ಡಿ ವೈ ಓ ಸಂಘಟನೆಯಿಂದ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಯಶ್ವಸಿಯಾಗಿ ಮಾಡಲಾಯಿತು.ಕಾರ್ಯಕ್ರವನ್ನು ಎ ಐ ಡಿ ವೈ ಓ ನ ರಾಜ್ಯ ಸಮಿತಿ ಸಧಸ್ಯರಾದ   ಬಿ. ಆರ್. ಉಮೇಶ ರವರು ಚಾಲನೆ ನೀಡಿದರು .ಜಿಲ್ಲಾ ಸಮಿತಿಯ ಕಾರ್ಯಧರ್ಶಿಗಳಾದ ರಮೇಶ ವಂಕಲಕುಂಟಿ ಹಾಗೂ  ಜಿಲ್ಲಾ ಸಂಘಟನಕಾರರಾದ ಶರಣು ಗಡ್ಡಿಯವರು ನೆತೃತ್ವ ವಹಿಸಿದ್ದರು ವಿದ್ಯಾರ್ಥೀಗಳಾದ ಮಂಜುನಾಥ, ಶರಣಪ್ಪ, ನೀರಜ, ಮಾಬು, ಪರಶುರಾಮ ಗಾಳಿ, ಗವಿ ಪ್ರಸಾದ, ಮಹೇಶ ಮಂಜುನಾಥ, ಪ್ರಕಾಶ, ರುದ್ರೇಶ, ಮತ್ತು ಇತರರು ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.

Advertisement

0 comments:

Post a Comment

 
Top