ಅವರು ಶುಕ್ರವಾರ ಬೆಳಿಗ್ಗೆ ಗಿಣಿಗೇರಿಯ ಬೇಂದ್ರೆ ಪಬ್ಲಿಕ್ ಸ್ಕೂಲ್ನಲ್ಲಿ ಜರುಗಿದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡುತ್ತಿದ್ದರು.
ಶಿಕ್ಷಕರಾಗಿ ದೇಶ ಅಷ್ಟೇ ಅಲ್ಲದೇ ವಿಶ್ವ ತಮ್ಮಡೆ ತಿರುಗಿ ನೋಡುವಂತೆ ಪರಿಪೂರ್ಣ ಸೇವೆ ಅವರದಾಗಿತ್ತು. ಸ್ವಾಮಿವಿವೇಕಾನಂದ ನಂತರ ಭಾರತೀಯರ ಹಿಂದು ಧರ್ಮ ದೇಶ ಪ್ರೇಮವನ್ನು ವಿಶ್ವಕ್ಕೆ ಪರಿಚಯಿಸಿದ ವ್ಯಕ್ತಿ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಾಲಕರಾದ ಶರಭಯಸ್ವಾಮಿ, ಮುಖ್ಯೋಪಾಧ್ಯಾಯ ಬಸವರಾಜ ಶಿರುಗುಂಪಿ ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಾದ ಚೈತ್ರ ಪ್ರಾರ್ಥಿಸಿದರೆ, ಯಶವಂತ ಹೊಸೂರ ಸ್ವಾಗತಿಸಿದರು. ಮುಕುಂದ ಬೆಳ್ಳಿ ಮತ್ತು ಮೇಘನಾ ನಿರೂಪಿಸಿದರೆ, ಕೊನೆಯಲ್ಲಿ ಮುಕುಂದ ಬೆಳ್ಳಿ ವಂದಿಸಿದರು.

0 comments:
Post a Comment