PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಕೊಪ್ಪಳದ ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರರವರಿಗೆ ಮೈಸೂರಿನ ಗ್ರಾಮಾಂತರ ಬುದ್ದಿ ಜೀವಿಗಳ ಬಳಗದವರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾಭನವದಲ್ಲಿ ರಾಜ್ಯಮಟ್ಟದ ಪ್ರೇಮ ಕವಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ ಈ ಸಮಾರಂಭದ ಅಧ್ಯಕ್ಷತೆಯನ್ನು ಬೇರ್‍ಯ ರಾಮಕುಮಾರರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ ಡಾ. ಮಹಾಬಲಿ ಕಿಕ್ಕೆರಿ, ಲತಾ ರಾಜಶೇಖರ, ಮಳಲಿ ವಸಂತ ಕುಮಾರ ಇನ್ನಿತರರು ಉಪಸ್ಥಿತರಿದ್ದರು 
ರಾಜ್ಯಮಟ್ಟದ ಕೆ.ಎಸ್.ಎನ್. ಪ್ರೇಮ ಕವಿ ಪುರಸ್ಕಾರವನ್ನು ಪಡೆದ ಶ್ರೀನಿವಾಸ ಚಿತ್ರಗಾರರಿಗೆ ಸಿಕ್ಕ ಪ್ರಶಸ್ತಿ ಜಿಲ್ಲೆಗೆ ಹೆಮ್ಮೆ ತರುವ ಸಮಗತಿಯಾಗಿದೆ ಎಂದು ಕೊಪ್ಪಳ ಜಿಲ್ಲೆಯ ಸಾಹಿತಿಗಳಾದ ವಿಠಪ್ಪ ಗೋರಂಟ್ಲಿ, ಡಾ. ಮಹಾಂತೇಶ ಮಲ್ಲನಗೌಡರ, ಡಾ. ವಿ.ಬಿ.ರಡ್ಡೇರ. ಜಿ.ಎಸ್. ಗೋನಾಳ, ಮಹೇಶ ಬಾಬು ಸುರ್ವೇ, ಬಿ.ಎಸ್.ಪಾಟೀಲ, ರಾಜಶೇಖರ ಅಂಗಡಿ, ಮಹೇಶ ಬಳ್ಳಾರಿ, ಬಸಪ್ಪ ದೇಸಾಯಿ, ಎ.ಪಿ.ಅಂಗಡಿ, ಶಿವಪ್ಪ ಜೋಗಿ ಸುಭಾಸ ರಡ್ಡಿ, ಗವಿಸಿದ್ದಪ್ಪ ಬಾರಕೇರ, ಸಿರಾಜ ಬಿಸರಳ್ಳಿ, ಮತ್ತು ಕವಿ ಸಮೊಹದವರು ಅಭಿನಂದಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ 

Advertisement

0 comments:

Post a Comment

 
Top