ಕೊಪ್ಪಳ ಜಿಲ್ಲಾ ನಾಲ್ಕನೇ ಚುಟುಕು ಸಮ್ಮೇಳನಾಧ್ಯಕ್ಷರಾದ ವಿಮಲಾ ಇನಾಮದಾರವರಿಗೆ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ
ಕೊಪ್ಪಳ : ಆಗಷ್ಟ ೨೫ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ನಾಲ್ಕನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಮಲಾ ಇನಾಮದಾರ ಅಳವಂಡಿ ಇವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು.
ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ, ಅಳವಂಡಿಯ ಕರ್ನಾಟಕ ವಿದ್ಯಾವರ್ಧಕ ಸಮಿತಿಯ ಕಾರ್ಯದರ್ಶಿ ರೇವಣಸಿದ್ದೇಶ್ವರಸ್ವಾಮಿ ಹಿರೇಮಠ ಅಳವಂಡಿ, ಅಧ್ಯಕ್ಷರಾದ ಭುಜಂಗಸ್ವಾಮಿ ಇನಾಮದಾರ, ಲೋಕಸಭಾ ಸದಸ್ಯರ ಆಪ್ತ ಸಹಾಯಕರಾದ ಶ್ರೀನಿವಾಸ ಎನ್.ಜೋಶಿ, ಜಿಲ್ಲಾ ಕನಕದಳ ಸೇವಾ ಸಮಿತಿಯ ಅಧ್ಯಕ್ಷರಾದ ಕರಿಯಪ್ಪ ಬೇವಿನಹಳ್ಳಿ, ಗೌರವಧ್ಯಕ್ಷರಾದ ದ್ಯಾಮಣ್ಣ.ಜಿ.ಕರಿಗಾರ, ವೇದಿಕೆಯ ಸಹಕಾರ್ಯದರ್ಶಿ ಮಂಜುನಾಥ ಕೋಳೂರ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ, ಗಂಗಾವತಿಯ ತಾಲೂಕಿನ ಕಾರ್ಯನಿರತ ಪತ್ರ ಕರ್ತರ ಸಂಘದ ಉಪಾಧ್ಯಕ್ಷರಾದ ವೆಂಕಟೇಶ ಕುಲಕರ್ಣಿ ಗಂಗಾವತಿ ತಾಲೂಕ ನಾಗರಿಕ ವೇದಿಕೆಯ ಅಧ್ಯಕ್ಷರಾದ ಸುಭಾಶ್ಚಂದ್ರ, ಗಂಗಾವತಿ ತಾಲೂಕ ಪತ್ರಕರ್ತರ ವೇದಿಕೆಯ ಅಧ್ಯಕ್ಷರಾದ ಮಲ್ಲಿರ್ಜುನ ಸಿದ್ದಾಪೂರ, ವೈದ್ಯರಾದ ಡಾ|| ಸಿ.ಬಿ.ಇನಾಮದಾರ, ಶಿವಮೂರ್ತಯ್ಯ ಕೊಚಲಾಪುರ, ಕವಿಗಳಾದ ಈಶ್ವರ ಹತ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.