ಕೊಪ್ಪಳ ತಾಲೂಕಿನ ೯ ಹಾಗೂ ಯಲಬುರ್ಗಾ ತಾಲೂಕಿನ ೦೧ ದೇವಸ್ಥಾನ ಸೇರಿದಂತೆ ಒಟ್ಟು ೧೦ ದೇವಸ್ಥಾನಗಳ ಜೀರ್ಣೋದ್ಧಾರ, ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಕ್ಕಾಗಿ ಪ್ರತಿ ದೇವಸ್ಥಾನಕ್ಕೆ ತಲಾ ೩ ಲಕ್ಷ ರೂ.ಗಳಂತೆ ಒಟ್ಟು ೩೦ ಲಕ್ಷ ರೂ.ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಮರಿಯಮ್ಮ ದೇವಸ್ಥಾನ, ಹಳೇಬಂಡಿಹರ್ಲಾಪುರ ಗ್ರಾಮದ ಕಂಠಮ್ಮ ದೇವಸ್ಥಾನ, ಹಿಟ್ನಾಳ ಗ್ರಾಮದ ಮೂಕಬಸವೇಶ್ವರ ದೇವಸ್ಥಾನ, ಭಾಗ್ಯನಗರದ ರಾಮದೇವ ದೇವಸ್ಥಾನ, ಘಟ್ಟರೆಡ್ಡಿಹಾಳ ಹಾಗೂ ಮುರ್ಲಾಪುರ ಗ್ರಾಮದ ರಣದಮ್ಮ ದೇವಸ್ಥಾನ, ಚುಕ್ಕನಕಲ್ ಗ್ರಾಮದ ಹನುಮಂತ ದೇವರ ದೇವಸ್ಥಾನ, ಹೊಸಲಿಂಗಾಪುರ ಗ್ರಾಮದ ಕಾಳಿಕಾದೇವಿ ದೇವಸ್ಥಾನ, ಕಾತರಕಿ ಗ್ರಾಮದ ಕಾಳಿಕಾದೇವಿ ದೇವಸ್ಥಾನ ಮತ್ತು ಯಲಬುರ್ಗಾ ತಾಲೂಕು ಬನ್ನಿಕೊಪ್ಪ ಗ್ರಾಮದ ಚನ್ನಬಸವೇಶ್ವರ ದೇವಸ್ಥಾನಗಳಿಗೆ ತಲಾ ೩ ಲಕ್ಷ ರೂ.ಗಳಂತೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.