PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ. : ಕರ್ನಾಟಕ ಲೋಕಾಯುಕ್ತದ ಕೊಪ್ಪಳ ಡಿವೈಎಸ್‌ಪಿ ಅವರು ಡಿ. ೩೦ ಮತ್ತು ೩೧ ರಂದು ಕ್ರಮವಾಗಿ ಗಂಗಾವತಿ ಮತ್ತು ಕೊಪ್ಪಳದಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸುವರು.
  ಲೋಕಾಯುಕ್ತ ಕೊಪ್ಪಳ ಡಿವೈಎಸ್‌ಪಿ ಅವರು ಡಿ. ೩೦ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೦೨ ಗಂಟೆಯವರೆಗೆ ಗಂಗಾವತಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ದೂರು ಸ್ವೀಕರಿಸುವರಲ್ಲದೆ, ಅವರ ಅಹವಾಲುಗಳನ್ನು ಆಲಿಸುವರು.  ಡಿ. ೩೧ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೦೨ ಗಂಟೆಯವರೆಗೆ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸುವರು.  ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿಯನ್ನು ನೀಡಿ, ಲೋಕಾಯುಕ್ತ ಪ್ರವಾಸ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಯಾವುದೇ ದೂರು ಸಲ್ಲಿಸಲು ಅಗತ್ಯವಾಗುವ ಪ್ರಪತ್ರ ಸಂ. ೧ ಮತ್ತು ೦೨ ನಮೂನೆಯನ್ನು ಸ್ಥಳದಲ್ಲಿಯೇ ಪಡೆದು, ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕೊಪ್ಪಳ, ದೂರವಾಣಿ ಸಂಖ್ಯೆ ೨೨೦೫೩೩ ಅಥವಾ ೨೨೦೨೦೦ ಕ್ಕೆ ಸಂಪರ್ಕಿಸಬಹುದಾಗಿದೆ 

Advertisement

0 comments:

Post a Comment

 
Top