ಕೊಪ್ಪಳ ಫೆ. - ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲ ಗ್ರಾಹಕರು ತಮ್ಮ ಮನೆಯ ವಿದ್ಯುಚ್ಛಕ್ತಿ ಬಿಲ್ಲಿನ ಆರ್.ಆರ್. ಸಂಖ್ಯೆ ಮತ್ತು ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ಆಯಾ ಅಡುಗೆ ಅನಿಲ ವಿತರಕರಿಗೆ ಫೆ. ೦೫ ರ ಒಳಗಾಗಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲ ಗ್ರಾಹಕರು ತಮ್ಮ ಮನೆಯ ವಿದ್ಯುಚ್ಛಕ್ತಿ ಬಿಲ್ಲಿನ ಆರ್.ಆರ್. ಸಂಖ್ಯೆ ಹಾಗೂ ಪಡಿತರ ಚೀಟಿಯ ಜೆರಾಕ್ಸ್ ಪ್ರತಿ ಹಾಗೂ ಪ್ರಸ್ತುತ ವಿಳಾಸವನ್ನು ಅಡುಗೆ ಅನಿಲ ವಿತರಕರಿಗೆ ಅಥವಾ ಸಿಲಿಂಡರ್ ನೀಡುವ ಡೆಲಿವರಿ ಬಾಯ್ಸ್ಗಳಿಗೆ ನೀಡಬೇಕು. ಈ ರೀತಿಯ ದಾಖಲೆ/ ಮಾಹಿತಿ ಸಲ್ಲಿಸಲು ಫೆ. ೦೫ ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಮಾಹಿತಿ ನೀಡದವರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಅಲ್ಲದೆ ಅಡಿಗೆ ಅನಿಲ ಪೂರೈಕೆಯನ್ನು ತಡೆ"ಡಿಯಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment
Click to see the code!
To insert emoticon you must added at least one space before the code.