
ಕೊಪ್ಪಳ : ಕಾವ್ಯ ವಾಚನ ಎಂಬುದು ಒಂದು ದೊಡ್ಡ ಕಲೆ. ಅದನ್ನು ಉತ್ತಮಪಡಿಸಿಕೊಳ್ಳಬೇಕು. ಕಾವ್ಯ ವಾಚನಕ್ಕೆ ತಕ್ಕಂತಹ ಕವನಗಳನ್ನು ಕವಿಗಳು ಆಯ್ದುಕೊಳ್ಳಬೇಕು. ಕೇಳುಗನಿಗೆ ಸ್ಪಷ್ಟವಾಗಿ ಕೇಳುವಂತಿರಬೇಕು ಎಂದು ಹಿರಿಯ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕವಿಸಮೂಹ ಹಮ್ಮಿಕೊಂಡಿದ್ದ ಕವಿಸಮಯ ಕಾರ್ಯಕ್ರಮದಲ್ಲಿ ಕವಿತೆಗಳನ್ನು ವಿಮರ್ಶಿಸಿ ಮಾತನಾಡುತ್ತಿದ್ದರು. ಕವಿಸಮಯದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ವಿಚಾರ ಹಂಚಿಕೊಳ್ಳುವುದರಿಂದ ಎಲ್ಲರ "ಚಾರಗಳು ಬೆಳೆಯುತ್ತವೆ. ಕವಿಸಮೂಹ ಹಮ್ಮಿಕೊಂಡಿರುವ ಕವಿಸಮಯ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಕವಿಸಮಯ ಕಾರ್ಯಕ್ರಮದಲ್ಲಿ ಒಟ್ಟು ಹನ್ನೆರಡು ಕವಿಗಳು ತಮ್ಮ ಕವನ ವಾಚನ ಮಾಡಿದರು. ಕವನಗಳು ಒಳ್ಳೆಯ ಆಶಯ ಹೊಂದಿವೆ. ಚರಿತ್ರೆಯನ್ನು ಬೇಗ ಮರೆಯುವ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು. ಬಹುರಾಷ್ಟ್ರೀಯ ಕಂಪನಿಗಳ, ಸಂಘ ಪರಿವಾರದ ಕುತಂತ್ರಗಳ, ಬಡವರ ಹಕ್ಕಿನ, ಬೆವರಿನ ಬಗ್ಗೆ ಬರೆದ ಕವನಗಳನ್ನು ಮೆಚ್ಚಿಕೊಂಡು ಮಾತನಾಡಿದ ಅವರು , ಸ್ಥಳೀಯ ಚರಿತ್ರೆಯ ಪ್ರಚಾರವಾಗಬೇಕು , ಚರಿತ್ರೆಯ ಜೊತೆಗೆ ವರ್ತಮಾನವನ್ನು ಮರೆಯಬಾರದು ಎಂದರು.ಕವಿ ಗೋಷ್ಠಿಯಲ್ಲಿ ಜಡೆಯಪ್ಪ-ಅಂತರಿಗಳ ಅಂತರ, ಶಿ.ಕಾ.ಬಡಿಗೇರ- ಒಂದು ಮೊಳೆಯ ಸ್ವಗತ,ಶ್ರೀನಿವಾಸ ಚಿತ್ರಗಾರ-ಹನಿಗಳು, ಮೆಹಮೂದ ಮಿಯ- ಮನ್ವಂತರ, ಜಿ.ಎಸ್.ಬಾರಕೇರ- ಕೊಪ್ಪಳ ಜಿಲ್ಲೆ, ಹನುಮಪ್ಪ ಬಾರಕೇರ- ಮಹಾದೇವ ದೇವಾಲಯ, ಲಕ್ಷ್ಮೀ - ನಿಸರ್ಗ, ಪುಷ್ಪಲತಾ ಏಳುಭಾವಿ- ಬಹುರಾಷ್ಟ್ರೀಯ ಕಂಪನಿಗಳು, ವಿಮಲಾ ಇನಾಂದಾರ್-ಹಕ್ಕು, ಬಿ.ಎಸ್.ಪಾಟೀಲ್- ಸೋಲು, ಸಿರಾಜ್ ಬಿಸರಳ್ಳಿ- ನನ್ನೂರ ಕೋಗಿಲೆಗಳು ಹಾಡುವುದಿಲ್ಲ, ಅಲ್ಲಮಪ್ರಭು ಬೆಟ್ಟದೂರು- ಕರ್ನಾಟಕದ ಕತೆ ಎಂಬ ಕವನಗಳನ್ನು ವಾಚಿಸಿದರು.
ಕವಿಗ್ಠೋಯಲ್ಲಿ ಬಸವರಾಜ ಶೀಲವಂತರ, ಶಿವಾನಂದ ಹೊದ್ಲೂರ,ಡಾ. ರಾಜೇಶ್ವರಿ ಇನಾಂದಾರ್ ಅಳವಂಡಿ, ಭುಜಂಗಸ್ವಾಮಿ ಇನಾಂದಾರ್ ಇನ್ನಿತರರು ಭಾಗವಹಿಸಿದ್ದರು. ಬಿ.ಎಸ್.ಪಾಟೀಲ್ ಸ್ವಾಗತಿಸಿದರೆ, ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.
0 comments:
Post a Comment
Click to see the code!
To insert emoticon you must added at least one space before the code.