PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೦೧ (ಕ ವಾ)  ಗ್ರಾಮೀಣ ನೈರ್ಮಲ್ಯ, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣದ ಮಹತ್ವ ಸೇರಿದಂತೆ ಕುರಿತಂತೆ ಗ್ರಾಮೀಣ ಜನರಲ್ಲಿ ಜನಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ  ಗಾಂಧೀಜಿಯವರ ಕನಸು-ಕರ್ನಾಟಕದಲ್ಲಿ ನನಸು ಎನ್ನುವ ವಿಶೇಷ ಜಾಗೃತಿ ಅಭಿಯಾನವನ್ನು ದಿನಾಂಕ: ೦೨-೧೦-೨೦೧೫ ರಿಂದ ೨೧-೧೦-೨೦೧೫ ರ
     ಗಾಂಧೀಜಿ ಕನಸು-ಕರ್ನಾಟಕದಲ್ಲಿ ನನಸು ಅಭಿಯಾನಕ್ಕಾಗಿ ವಾರ್ತಾ ಇಲಾಖೆಯು ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ.  ಅಭಿಯಾನದ ಸಂದರ್ಭದಲ್ಲಿ ಪ್ರತಿ ದಿನ ೦೫ ಗ್ರಾಮಗಳಲ್ಲಿ ವಿಶೇಷ ವಾಹನವು ಸಂಚರಿಸಲಿದ್ದು, ಜನಜಾಗೃತಿಗಾಗಿ ಬೀದಿನಾಟಕ, ಜಾನಪದ ಸಂಗೀತ, ವಸ್ತುಪ್ರದರ್ಶನಗಳ, ಕಿರು ಚಿತ್ರ ಪ್ರದರ್ಶನದ ಮೂಲಕ ಜನ ಜಾಗೃತಿ ಮೂಡಿಸಲಿದೆ.  ಅಲ್ಲದೆ ಈ ಕುರಿತಂತೆ ಕರಪತ್ರ/ಮಡಿಕೆ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಿದೆ. 
ಅ. ೦೨ ರಂದು ಬೆಣಕಲ್, ವೆಂಕಟಗಿರಿ, ಆಗೋಲಿ, ಬಸಾಪಟ್ಟಣ, ಸಂಗಾಪುರ, ಮಲ್ಲಾಪುರ.  ಅ. ೦೩ ರಂದು ಜೀರಾಳಕಲ್ಗುಡಿ, ಢಣಾಪುರ, ಹೊಸಕೇರಾ, ಹಣವಾಳ, ಸಿದ್ದಾಪುರ.  ಅ. ೦೪ ರಂದು ಯರಡೋಣ, ಬೂದಗುಂಪಾ, ಚಳ್ಳಾರಿ, ಮೈಲಾಪುರ, ನವಲಿ.  ಅ. ೦೫ ರಂದು ಕರಡೋಣ, ಹಿರೇಖೇಡ, ಹುಲಿಹೈದರ, ಗೌರಿಪುರ, ಬಸರಿಹಾಳ.  ಅ. ೦೬ ರಂದು ಕನಕಗಿರಿ, ಸುಳೇಕಲ್, ಮುಸಲಾಪುರ, ಹಾಸಗಲ್, ಬೊಮ್ಮನಾಳ.  ಅ. ೦೭ ರಂದು ಬಿಜಕಲ್, ಕೇಸೂರು, ದೋಟಿಹಾಳ, ಮುದೇನೂರು, ಜುಮ್ಲಾಪುರ.  ಅ. ೦೮ ರಂದು ತಾವರಗೇರಾ, ಮೇಣದಾಳ, ಮನ್ನಾಪುರ, ಗುಮಗೇರಾ, ಕಂದಕೂರು.  ಅ. ೦೯ ರಂದು ಹಿರೇಬನ್ನಿಗೋಳ, ಕೊರಡಕೇರಾ, ತಳವಗೇರಾ, ಚಳಗೇರಾ, ಅಡವಿಬಾವಿ.  ಅ. ೧೦ ರಂದು ಕಬ್ಬರಗಿ, ಕಾಟಾಪುರ, ಅಂಟರಠಾಣಾ, ಹೂಲಗೇರಾ, ಯರಗೇರಾ.  ಅ. ೧೧ ರಂದು ತುಮ್ಮರಗುದ್ದಿ, ಜಾಗೀರ ಗುಡದೂರು, ಹಾಬಲಕಟ್ಟಿ, ಮಾಲಗಿತ್ತಿ, ಹಿರೇಗೊಣ್ಣಾಗರ.  ಅ. ೧೨ ರಂದು ಬಂಡಿ, ಬಳೂಟಗಿ, ಕರಮುಡಿ, ಹಿರೇಮ್ಯಾಗೇರಿ, ಮುಧೋಳ.  ಅ. ೧೩ ರಂದು ಗೆದಗೇರಿ, ಮುರಡಿ, ಗುನ್ನಾಳ, ಮಾಟಲದಿನ್ನಿ, ಹಿರೇವಂಕಲಕುಂಟಾ.  ಅ. ೧೪ ರಂದು ಬೇವೂರು, ವಣಗೇರಿ, ನೆಲಜೇರಿ, ಕುದರಿಮೋತಿ, ಮಂಗಳೂರು, ಅ. ೧೫ ರಂದು ಶಿರೂರು, ಬಳಗೇರಿ, ಚಿಕ್ಕಮ್ಯಾಗೇರಿ, ಸಂಗನಾಳ, ಕಲ್ಲೂರು.  ಅ. ೧೬ ರಂದು ರಾಜೂರು, ಮಸಬಹಂಚಿನಾಳ, ಇಟಗಿ, ಬೆಣಕಲ್, ಬನ್ನಿಕೊಪ್ಪ.  ಅ. ೧೭ ರಂದು ಕವಲೂರು, ಅಳವಂಡಿ, ಬಿಸರಳ್ಳಿ, ಹಿರೇಸಿಂಧೊಗಿ, ಹಲಗೇರಿ.  ಅ. ೧೮ ರಂದು ಕೋಳೂರು, ಮಾದಿನೂರು, ಭಾಗ್ಯನಗರ, ಓಜನಹಳ್ಳಿ, ಕಿನ್ನಾಳ.  ಅ. ೧೯ ರಂದು ಕಲಕೇರಿ, ಇರಕಲ್‌ಗಡಾ, ಲೇಬಗೇರಿ, ಗಿಣಗೇರಾ, ಕಲ್‌ತಾವರಗೇರಾ.  ಅ. ೨೦ ರಂದು ಗುಳದಳ್ಳಿ, ಬೂದಗುಂಪಾ, ಇಂದರಗಿ, ಅಗಳಕೇರಾ, ಹಿಟ್ನಾಳ ಹಾಗೂ ಅ. ೨೧ ರಂದು ಶಿವಪುರ, ಹುಲಿಗಿ, ಮುನಿರಾಬಾದ್ ಹೊಸಳ್ಳಿ, ಬೇವಿನಾಳ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. 
     ಈ ವಿಶೇಷ ಅಭಿಯಾನ ಕಾರ್ಯಕ್ರಮಕ್ಕೆ ಆಯಾ ಗ್ರಾಮ ಪಂಚಾಯತಿಗಳು ಸೂಕ್ತ ಸಹಕಾರ ನೀಡುವುದರ ಜೊತೆಗೆ, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತಾಗಲು ಆಯಾ ಪಿಡಿಓ ಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ತಿಳಿಸಿದ್ದಾರೆ.



ವರೆಗೆ ೨೦ ದಿನಗಳ ಕಾಲ ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ.

Advertisement

0 comments:

Post a Comment

 
Top