ಕೇಂದ್ರ ಸರ್ಕಾರದ ಕೃಷಿ ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ಲೋಕಸಭೆ ಸಚಿವಾಲಯದ ಕೃಷಿ ಇಲಾಖೆ ಸಮಿತಿಯ ಉಪ ಕಾರ್ಯದರ್ಶಿಗಳು ನೇಮಕ ಕುರಿತಂತೆ ಸಂಸದರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಕೃಷಿ ಇಲಾಖೆ ೨೦೧೪-೧೫ ನೇ ಸಾಲಿಗಾಗಿ ಸ್ಥಾಯಿ ಸಮಿತಿಯನ್ನು ರಚಿಸಲಾಗಿದ್ದು, ಬಿಹಾರ ರಾಜ್ಯದ ಸಂಸದ ನಾರಾಯಣ ಯಾದವ್ ಅವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿದಂತೆ ಒಟ್ಟು ೩೧ ಸಂಸದರು ಸಮಿತಿಯ ಸದಸ್ಯರುಗಳಾಗಿರುತ್ತಾರೆ. ಸಮಿತಿಯು ೨೦೧೪ ರ ಸೆ. ೦೧ ರಿಂದ ೨೦೧೫ ರ ಆಗಸ್ಟ್ ೩೧ ರವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ .
0 comments:
Post a Comment