PLEASE LOGIN TO KANNADANET.COM FOR REGULAR NEWS-UPDATES

ದಿ ೧೫-೫-೨೦೧೪ ಸೋಮವಾರ ಬೆಳಿಗ್ಗೆ ೧೦-೦೦ ಘಂಟೆಗೆ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಬಾಲಕರ ವಸತಿ ನಿಲಯದಲ್ಲಿ ಖ್ಯಾತ ಶಿಕ್ಷಣ ತಜ್ಞರಾದ  ಡಾ|| ಗುರುರಾಜ ಕರಜಿಗಿಯವರು ’ಮನೆ ಮಗುವಿನ ಮನ ಆರಳಿಸಲಿ’. ’ಶಾಲೆ ಸಮಾಜದಲ್ಲಿ  ಪರಿವರ್ತನೆ ತರಲಿ,’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರಣ ಕೊಪ್ಪಳ ತಾಲೂಕಿನ ಪ್ರಾಥಮಿಕ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳ ಪಾಲಕರು ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳು ಶಿಕ್ಷಣ ಹಿತ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ವಿನಂತಿ.
            ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ. ಜಗದ್ಗುರು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೋಳ್ಳಲಿದ್ದಾರೆ. ಅಧ್ಯಕ್ಷೆತೆಯನ್ನು ವಿಕಾಸ ಅಕಾಡೆಮಿಯ ಜಿಲ್ಲಾಸಂಚಾಲಕರಾದ  ವಿ.ಎಮ್. ಬೂಸನೂರ ಮಠ ವಹಿಸಿಕೋಳ್ಳಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಪ್ಪಳ ತಾಲೂಕಿನ ಕ್ಷೆತ್ರಶಿಕ್ಷಣಾಧಿಕಾರಿಗಳಾದ ಶ್ರೀ ಉಮೇಶ ಪೂಜಾರ ಮತ್ತು  ಆರ್. ಬಿ. ಪಾನಗಂಟಿ ವಕೀಲರು, ಅಧ್ಯಕ್ಷರು ವಿಧ್ಯಾ ವಿಕಾಸ ಪ್ರೌಡಶಾಲೆ ಭಾಗ್ಯನಗರ ಮತ್ತು ಸಂಗಪ್ಪ ವಕ್ಕಳದ  ಕೈಗಾರಿಕೊದ್ಯಮಿಗಳು ವಿರುಪಾಕ್ಷಪ್ಪ ನವೋದಯ ಭಾಗವಹಿಸಲಿದ್ದಾರೆ., ಎಂದು ವಿಕಾಸ ಅಕಾಡೆಮಿಯ ತಾಲುಕಾ ಸಂಚಾಲಕರಾದ  ಸಿದ್ದರಡ್ಡಿ ಡಂಬ್ರಳ್ಳಿ ಮತ್ತು  ಪ್ರಭುಗೌಡ ಮೈನಳ್ಳಿ  ತಿಳಿಸಿದ್ದಾರೆ.  

Advertisement

0 comments:

Post a Comment

 
Top